ಚಿತ್ರದುರ್ಗ : ಭದ್ರಾ ಮೇಲ್ದಂಡೆ ಯೋಜನೆ ಶೀಘ್ರ ಜಾರಿ, ಕೇಂದ್ರ ಸರ್ಕಾರ 5300 ಕೋಟಿ ಕೂಡಲೇ ಬಿಡುಗಡೆ ಮಾಡ್ಬೇಕು ಎಂದು ಚಿತ್ರದುರ್ಗದಲ್ಲಿ ರೈತರು ಮಾಡ್ತಿರೋ ಹೋರಾಟ ತೀವ್ರ ಸ್ವರೂಪ ಪಡೆಯುತ್ತಿದೆ.
ಭದ್ರಾ ಮೇಲ್ದಂಡೆ ಯೋಜನೆ ವಿಳಂಬ ಹಿನ್ನೆಲೆಯಿಂದಾಗಿ ಚಿತ್ರದುರ್ಗ ಜಿ.ಪಂ. ಗೇಟ್ಗಳಿಗೆ ರೈತರ ಟ್ರಾಕ್ಟರ್ಗಳಿಂದ ದಿಗ್ಬಂಧನ ಹಾಕಿದ್ದಾರೆ. ಬೆಳ್ಳಂಬೆಳಗ್ಗೆ ಹತ್ತಾರು ಟ್ರಾಕ್ಟರ್ಗಳನ್ನು ಜಿ.ಪಂ ಗೇಟ್ಗಳಿಗೆ ರೈತರು ಅಡ್ಡ ಹಾಕಿದ್ದಾರೆ.
ಈ ಹಿನ್ನಲೆಯಿಂದಾಗಿ ಇಂದು ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ದಿಶಾ ಸಭೆ ನಡೆಸಲಿದ್ದಾರೆ. ಸಚಿವರು, ಅಧಿಕಾರಿಗಳು ಪ್ರವೇಶಿಸದಂತೆ ರೈತರು ಅಡ್ಡಹಾಕಿದ್ದು, ಕಳೆದ 31 ದಿನಗಳಿಂದ ಭದ್ರೆಗಾಗಿ ರೈತರು ಹೋರಾಟ ಮಾಡುತ್ತಿದ್ದಾರೆ. ಇವರ ಹೋರಾಟಕ್ಕೆ ಸರ್ಕಾರ, ಸಚಿವರು, ಶಾಸಕರು ಪ್ರತಿಕ್ರಿಯಿಸಲೇ ಇಲ್ಲ.
ಹಾಗಾಗಿ ಹೋರಾಟದ ತೀವ್ರತೆ ಬಿಸಿ ಮುಟ್ಟಿಸಲು ಇದೀಗ ರೈತರಿಂದ ವಿಭಿನ್ನ ಹೋರಾಟ ಪ್ರಾರಂಭವಾಗಿದೆ. ರಾಜ್ಯ ರೈತಸಂಘ, ಹಸಿರು ಸೇನೆ ನೇತೃತ್ವದಲ್ಲಿ ಭದ್ರಗಾಗಿ ಹೋರಾಟ ನಡೆಯುತ್ತಿದೆ. ಈಚಘಟ್ಟ ಸಿದ್ದವೀರಪ್ಪ ನೇತೃತ್ವದಲ್ಲಿ ಜಿ.ಪಂಗೆ ಟ್ರಾಕ್ಟರ್ಗಳಿಂದ ದಿಗ್ಬಂಧನ ಹಾಕಿದ್ದಾರೆ.
ಭದ್ರಾ ಮೇಲ್ದಂಡೆ ಯೋಜನೆಯ ಅನುಷ್ಠಾನಕ್ಕಾಗಿ ಕೇಂದ್ರ ಸರ್ಕಾರವು ತನ್ನ 2023-24ನೇ ಸಾಲಿನ ಆಯವ್ಯಯದಲ್ಲಿ 5300 ಕೋಟಿ ರೂಪಾಯಿ ಅನುದಾನ ಘೋಷಿಸಲಾಗಿತ್ತು. ಆದರೆ, ಈವರೆಗೆ ಬಿಡುಗಡೆ ಆಗಿಲ್ಲ. ಹಾಗಾಗಿ ರೈತರು ಈ ರೀತಿ ಹೋರಾಟ ನಡೆಸುತ್ತಿದ್ದಾರೆ.
ಇದನ್ನೂ ಓದಿ : ‘ಭಾರತ್ ಕಾ ಅಮ್ರಿತ್ ಕಲಶ್’ ಜಾನಪದ ಸಿಂಗಿಂಗ್ ರಿಯಾಲಿಟಿ ಶೋಗೆ ಬೆಂಗಳೂರಿನ ವೆ.ಚಿ ಅರುಣ್ ಕುಮಾರ್ ಆಯ್ಕೆ..!