ಬೀದರ್ : ಜಿಲ್ಲೆಯ ಔರಾದ್ ತಾಲೂಕಿನ ಬಳಿ ಬರೋಬ್ಬರಿ 15 ಕೋಟಿ ರೂಪಾಯಿ ಮೌಲ್ಯದ ಗಾಂಜಾವನ್ನು ಎನ್ಸಿಬಿ(NCB) ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಒಡಿಶಾದ ಮಲ್ಕಾನ್ಗಿರಿಯಿಂದ ಮಹಾರಾಷ್ಟ್ರದ ಮೂಲಕ ಗಡಿ ಜಿಲ್ಲೆ ಬೀದರ್ಗೆ ಅಕ್ರಮವಾಗಿ ಲಾರಿಯಲ್ಲಿ 1500 ಕೆ.ಜಿ ಗಾಂಜಾವನ್ನ ಸಾಗಿಸಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಬೆಂಗಳೂರಿನ ಎಸ್ಸಿಬಿ ಅಧಿಕಾರಿಗಳು ಮತ್ತು ಔರಾದ್ ಪೊಲೀಸರು ಕಾರ್ಯಾಚರಣೆ ನಡೆಸಿ ವನಮಾರಪಳ್ಳಿ ಬಳಿ ಗಾಂಜಾವನ್ನು ಸೀಜ್ ಮಾಡಿದ್ದಾರೆ.
ಖತರ್ನಾಕ್ ಖಿಲಾಡಿಗಳು ಬಹಳ ಉಪಾಯದಿಂದ ಅಕ್ರಮವಾಗಿ ಗಾಂಜಾವನ್ನು ಸಾಗಿಸುತ್ತಿದ್ದರು. ಲಾರಿಯಲ್ಲಿ ಸಿಮೆಂಟ್ ಇಟ್ಟಿಗೆ ಮಧ್ಯೆ ಗಾಂಜಾ ಪ್ಯಾಕೇಟ್ ಅಡಗಿಸಿ ತರಲಾಗ್ತಿತ್ತು. ಆದರೆ ಅಧಿಕಾರಿಗಳು ಸೂಕ್ತ ತನಿಖೆ ನಡೆಸಿ ಸಾಗಿಸುತ್ತಿದ್ದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಗಾಂಜಾ ಸಾಗಿಸುತ್ತಿದ್ದ ಹುಮನಾಬಾದ್ ತಾಲ್ಲೂಕಿನ ಹಂದಿಕೇರಾದ ಇಬ್ಬರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ವನಮಾರಪಳ್ಳಿ ಬಳಿ ಸಿಪಿಐ ರಘುವೀರಸಿಂಗ್ ಮತ್ತು ತಂಡ ಈ ಮೆಗಾ ಕಾರ್ಯಚರಣೆ ನಡೆಸಿದೆ. ಬೀದರ್ SP ಚೆನ್ನಬಸವಣ್ಣ ಲಂಗೋಟಿ ಈ ಬಗ್ಗೆ ಮಾಹಿತಿ ನೀಡಿದ್ದು, ಈ ಕುರಿತು ಔರಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಬೆಂಗಳೂರಿನಲ್ಲಿ ಸ್ಯಾಂಡಲ್ವುಡ್ ನಟ ಚೇತನ್ ಚಂದ್ರ ಮೇಲೆ ಮಾರಣಾಂತಿಕ ಹಲ್ಲೆ – ವಿಡಿಯೋ ವೈರಲ್..!