ಬೆಂಗಳೂರು : ಕಿಡ್ನಾಪ್ ಹಾಗೂ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಕಿಲ್ಲರ್ ಡಿ ಗ್ಯಾಂಗ್ ಇರುವ ಪೊಲೀಸ್ ಠಾಣೆಗೆ ಶಾಮಿಯಾನ, ಬ್ಯಾರಿಕೇಡ್ ಹಾಕಿ ಠಾಣೆಯ ಸುತ್ತಲೂ 144 ಸೆಕ್ಷನ್ ಕೂಡ ಜಾರಿಯಾಗಿತ್ತು. ದರ್ಶನ್ ಇರುವ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆ ಬಳಿ 144 ಸೆಕ್ಷನ್ ಹಾಕಿದ್ದರಿಂದ ವಾಹನ ಸವಾರರು ಪರದಾಟ ಅನುಭವಿಸುವಂತಾಗಿತ್ತು, ಹಾಗಾಗಿ ಜನರು ಭಾರೀ ಆಕ್ರೋಶ ಹೊರಹಾಕಿದ್ದರು.
ಇದೀಗ ಜನಾಕ್ರೋಶಕ್ಕೆ ಪೊಲೀಸರು ಕೊನೆಗೂ ಮಣಿದು, ಅನ್ನಪೂರ್ಣೇಶ್ವರಿ ನಗರ ಠಾಣೆ ಎದುರು ಹಾಕಿದ್ದ ಬ್ಯಾರಿಕೇಡ್ ತೆರವುಗೊಳಿಸಿದ್ದಾರೆ. ಬ್ಯಾರಿಕೇಡ್ ಹಾಕಿದ್ದಕ್ಕೆ ಸೋಷಿಯಲ್ ಮೀಡಿಯಾಗಳಲ್ಲೂ ತೀವ್ರ ಟೀಕೆ ವ್ಯಕ್ತವಾಗಿತ್ತು. ಇದೀಗ ಮಾಧ್ಯಮಗಳಲ್ಲಿ ಆಕ್ರೋಶ ವರದಿಯಾಗ್ತಿದ್ದಂತೆ ಪೊಲೀಸರು ಬ್ಯಾರಿಕೇಡ್ ತೆರವುಗೊಳಿಸಿದ್ದಾರೆ.
ದರ್ಶನ್ ಕೇಸ್ಗಾಗಿ ಪೊಲೀಸರು ರಸ್ತೆ ಕ್ಲೋಸ್ ಮಾಡಿದ್ದರು. ಡಿಸಿಪಿ ಗಿರೀಶ್ ಅವರು ಬ್ಯಾರಿಕೇಡ್ ತೆರವುಗೊಳಿಸಲು ಸೂಚನೆ ನೀಡಿದ ಹಿನ್ನಲೆ ಪೊಲೀಸರು ರಸ್ತೆಗೆ ಹಾಕಿದ್ದ ಬ್ಯಾರಿಕೇಡ್ ಮಾತ್ರ ತೆಗೆದಿದ್ದಾರೆ. ಆದರೆ ಠಾಣೆ ಸುತ್ತ ಹಾಕಿರೋ ಶಾಮಿಯಾನ ಸೈಡ್ವಾಲ್ ಇನ್ನೂ ಹಾಗೇ ಇದೆ. ಇದೀಗ ಸೈಡ್ವಾಲಗಳನ್ನೂ ತೆರವು ಮಾಡುವಂತೆ ಜನರು ಆಗ್ರಹಿಸುತ್ತಿದ್ದು, ಪಾರದರ್ಶಕ ತನಿಖೆಗೆ ಶಾಮಿಯಾನದ ಪರದೆ ಏಕೆ ಎಂದು ಜನರು ಪ್ರಶ್ನೆ ಮಾಡ್ತಿದ್ದಾರೆ.
ಇದನ್ನೂ ಓದಿ : ಬಿಜೆಪಿ ವರಿಷ್ಠ BSY ಮೇಲೆ ರಾಜಕೀಯ ವೈಷಮ್ಯ ಪ್ರದರ್ಶಿಸಲಾಗ್ತಿದೆ : ಕಾಂಗ್ರೆಸ್ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಕ್ರೋಶ..!