ಬೆಂಗಳೂರು : ರೌಡಿಶೀಟರ್ ಜೊತೆ ಲಿಂಕ್ನಲ್ಲಿದ್ದ ಆರೋಪ ಹಿನ್ನಲೆ ಬೆಂಗಳೂರಿನ ಸಿಸಿಬಿ ಇನ್ಸ್ಪೆಕ್ಟರ್ ಜ್ಯೋತಿರ್ಲಿಂಗರನ್ನು ಸಸ್ಪೆಂಡ್ ಮಾಡಿ ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಕರ್ತವ್ಯ ಲೋಪ ಹಿನ್ನೆಲೆ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ಸಿಸಿಬಿ ರೌಡಿ ನಿಗ್ರಹದಳದ ಪೂರ್ವ ವಿಭಾಗದ ಇನ್ ಚಾರ್ಜ್ ಆಗಿದ್ದ ಜ್ಯೋತಿರ್ಲಿಂಗ ಪ್ರತಿ ವಿಭಾಗದ ನಟೋರಿಯಸ್ ರೌಡಿಗಳ ಮಾಹಿತಿ ಕಲೆ ಹಾಕಿ ವರದಿ ನೀಡಬೇಕು. ಹಿರಿಯ ಅಧಿಕಾರಿಗಳು ರೌಡಿ ಶೀಟರ್ ರೋಹಿತ್ ಆಕ್ಟಿವೀಟಿಸ್ ಬಗ್ಗೆ ವರದಿ ಕೇಳಿದ್ದಾರೆ. ಆದರೆ ರೌಡಿ ಶೀಟರ್ ಕಾಡುಬೀಸನಹಳ್ಳಿ ರೋಹಿತ್ ಜತೆ ಲಿಂಕ್ನಲ್ಲಿದ್ದ ಜ್ಯೋತಿರ್ಲಿಂಗ ಆತನ ವಿರುದ್ದ ಯಾವುದೇ ಮಾಹಿತಿ ಕಲೆ ಹಾಕದೇ ವರದಿ ನೀಡಿದ್ದಾರೆ.
ಇನ್ನು ರೌಡಿ ಶೀಟರ್ ರೋಹಿತ್ ಸಂಬಂಧಿಸಿದ ಮಾಹಿತಿ ನೀಡದ ಹಿನ್ನಲೆ ಜ್ಯೋತಿರ್ಲಿಂಗ ವಿರುದ್ದ ರಿಪೋರ್ಟ್ ನೀಡಲಾಗಿತ್ತು. ರೌಡಿ ಶೀಟರ್ ಜತೆ ಲಿಂಕ್ನಲ್ಲಿದ್ದು, ಆತನಿಗೆ ಸಪೋರ್ಟ್ ಮಾಡಿದ ಆರೋಪ ಹಿನ್ನಲೆ ವರದಿ ಪರಿಶೀಲನೆ ನಡೆಸಿದ ಪೊಲೀಸ್ ಆಯುಕ್ತರು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ : ಇಂದು ಡಿ.ಕೆ ಸುರೇಶ್ ಪರ ನಟ ದರ್ಶನ್ ಪ್ರಚಾರ – ಬೃಹತ್ ರೋಡ್ ಶೋ..!