ಬೆಂಗಳೂರು : ಬನಶಂಕರಿ ದೇವಿಯ ಹುಂಡಿಗೆ ಹಣ ಹಾಕುವ ಬದಲು ಭಕ್ತರು ಚಿತ್ರ-ವಿಚಿತ್ರ ಕೋರಿಕೆಗಳನ್ನ ಪತ್ರ ಬರೆದು ಹಾಕಿದ್ದಾರೆ. ದೇವಾಲಯದ ಹುಂಡಿಗಳಲ್ಲಿ ಭಕ್ತರ ಪತ್ರಗಳ ಸಾಲೇ ಹರಿದು ಬಂದಿದೆ.
ಹೌದು, ನನ್ನ ಹುಡುಗ ನನ್ನಿಂದ ದೂರ ಆಗಲಿ, ಮಗನ ನಿಶ್ಚಿತಾರ್ಥ ಆಗಿದೆ ಮುರಿದು ಹೋಗದೆ ಇರೋಥರ ಮಾಡಮ್ಮ ಎಂದು ಬಸ್ ಟಿಕೆಟ್ಗಳಲ್ಲಿ ಭಕ್ತರು ಚಿತ್ರ-ವಿಚಿತ್ರ ಪತ್ರ ಬರೆದು ಹಾಕಿದ್ದಾರೆ.
ಅಷ್ಟೆ ಅಲ್ಲದೆ ತಾಯಿ ಮನೆ ಆಸ್ತಿ ನನಗೆ ಬರಲಿ, ಈ ಹಿಂದೆ ಬರೆದ ಪತ್ರ ಬೇಡ ಈ ಪತ್ರ ಈಡೇರಿಸಮ್ಮಾ ಎಂದು ಬರೆದಿರುವ ಚಿತ್ರ-ವಿಚಿತ್ರ ಪತ್ರಗಳು ಸಿಕ್ಕಿದೆ. ಹುಂಡಿ ಎಣಿಸುವಾಗ ಈ ಪತ್ರಗಳನ್ನು ನೋಡಿ ಆಡಳಿತ ಮಂಡಳಿ ಶಾಕ್ ಆಗಿದೆ.
ಇದನ್ನೂ ಓದಿ : ‘ಸಿಬಿಲ್ ಸ್ಕೋರ್’ ಸಿನಿಮಾಗೆ ನಾಯಕನಾದ ಮಂಜುಮ್ಮೆಲ್ ಬಾಯ್ಸ್ ಖ್ಯಾತಿಯ ಶ್ರೀನಾಥ್ ಭಾಸಿ..!
Post Views: 2,157