Download Our App

Follow us

Home » ಅಪರಾಧ » ಪತಿಯಿಂದಲೇ ಭಜರಂಗಿ ನಟಿಯ ಬರ್ಬರ ಹ*ತ್ಯೆ..!

ಪತಿಯಿಂದಲೇ ಭಜರಂಗಿ ನಟಿಯ ಬರ್ಬರ ಹ*ತ್ಯೆ..!

ಮೈಸೂರು : ಭಜರಂಗಿ ಚಿತ್ರದ ನಟಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮೈಸೂರು ಜಿಲ್ಲೆ ಬನ್ನೂರಿನ ತುರಗನೂರಿನಲ್ಲಿ ನಡೆದಿದೆ. ವಿದ್ಯಾ ಕೊಲೆಯಾದ ನಟಿಯಾಗಿದ್ದು, ಆಕೆ ಕಾಂಗ್ರೆಸ್ ಕಾರ್ಯಕರ್ತೆಯೂ ಆಗಿದ್ದರು. ನಟಿ ವಿದ್ಯಾ ಹಲವು ಸಿನಿಮಾಗಳಲ್ಲಿ ಪೋಷಕ ಪಾತ್ರ ಮಾಡಿದ್ದು, ಭಜರಂಗಿ, ಅಜಿತ್, ವೇದಾ, ಜೈಮಾರುತಿ-800 ಸಿನಿಮಾದಲ್ಲಿ ನಟಿಸಿದ್ರು. 2018ರಲ್ಲಿ ವಿದ್ಯಾ ಮದುವೆ ನಂದೀಶ್ ಜೊತೆ ಆಗಿತ್ತು.

ಇಬ್ಬರು ಹೆಣ್ಣು ಮಕ್ಕಳ ಸುಂದರ ಕುಟುಂಬದಲ್ಲಿ ವೈಮನಸ್ಸು ಉಂಟಾಗಿತ್ತು. ಪತಿ ಜೊತೆ ವೈಮನಸ್ಸಿನಿಂದ ನಟಿ ವಿಚ್ಛೇದನಕ್ಕೂ ಮುಂದಾಗಿದ್ದರು. ನಿನ್ನೆ ರಾತ್ರಿ ವಿದ್ಯಾ ಮೈಸೂರಿನಿಂದ ಪತಿ ಊರು ತುರಗನೂರಿಗೆ ಬಂದಿದ್ದರು. ಗಂಡ-ಹೆಂಡತಿ ನಡುವೆ ಜಗಳ ನಡೆದು ಸುತ್ತಿಗೆಯಿಂದ ಪತಿ ಹಲ್ಲೆ ಮಾಡಿದ್ದ. ನಂದೀಶ್ ಹಲ್ಲೆ ಮಾಡಿದ್ದ ಎಂದು ಪ್ರತ್ಯಕ್ಷದರ್ಶಿ ಭಾಗ್ಯ ಮಾಹಿತಿ ನೀಡಿದ್ದಾರೆ. ಆರೋಪಿ ನಂದೀಶ್ ವಿದ್ಯಾಳನ್ನು ಕೊಲೆ ಮಾಡಿ ಎಸ್ಕೇಪ್​ ಆಗಿದ್ದಾನೆ.

ವಿದ್ಯಾ ಮೈಸೂರಿನ ಶ್ರೀರಾಂಪುರದಲ್ಲಿ ವಾಸವಾಗಿದ್ದು, ಮೈಸೂರು ನಗರ ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ನಟಿ ವಿದ್ಯಾ ಸಂಘಟನೆ ಮಾಡಿದ್ದರು.
ಸ್ಥಳಕ್ಕೆ SP ಸೀಮಾ ಲಾಟ್ಕರ್, ASP ನಂದಿನಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪತಿ ನಂದೀಶ್​ಗಾಗಿ ಬನ್ನೂರು ಠಾಣೆ ಪೊಲೀಸರು ಶೋಧ ಮಾಡುತ್ತಿದ್ದಾರೆ.

ಇದನ್ನೂ ಓದಿ : ಬೆಂಗಳೂರು : ಮನೆಯಲ್ಲಿ ಆಡುತ್ತಿದ್ದ 5 ವರ್ಷದ ಮಗು ಸಂಪ್​ಗೆ ಬಿದ್ದು ಸಾ*ವು..!

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here