ಕನ್ನಡ, ತೆಲುಗು ತಮಿಳು ಸೇರಿದಂತೆ 5 ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಕುಶಾಲ್ ರಾಘವೇಂದ್ರ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಜೊತೆಗೆ ಚಿತ್ರದ ನಾಯಕನಾಗೂ ಕಾಣಿಸಿಕೊಳ್ಳುತ್ತಿದ್ದಾರೆ.
ಚೆನ್ನೈನ ಇಂಡಿಯನ್ ಸ್ಕೂಲ್ ಆಫ್ ಡ್ರಾಮಾದಲ್ಲಿ ಅಭಿನಯ, ನಿರ್ದೇಶನ ಪಾಠ ಕಲಿತ ಕುಶಾಲ್, ಗಂಗೋತ್ರಿ, ಸಾಗುತ ದೂರ ಸೇರಿ ಹಲವಾರು ಕನ್ನಡ, ಹಿಂದಿ ಸೀರಿಯಲ್ ಗಳಲ್ಲಿ ಹಾಗೂ ಸಿನಿಮಾಗಳಲ್ಲೂ ಸಹ ಬಣ್ಣ ಹಚ್ಚಿದ್ದಾರೆ. ಇವರ ನಿರ್ದೇಶನದ ತಮಿಳು ಚಿತ್ರವಿನ್ನೂ ರಿಲೀಸಾಗಬೇಕಿದೆ. ತಮ್ಮ ಎರಡನೇ ಪ್ರಯತ್ನದಲ್ಲೇ ಪ್ಯಾನ್ ಇಂಡಿಯಾ ಬಬನ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
ಇನ್ನು ಈ ಚಿತ್ರದ ನಾಯಕಿಯಾಗಿ ರಾಧಾ ಭಗವತಿ ಕಾಣಿಸಿಕೊಳ್ಳುತ್ತಿದ್ದು, ಇವರೂ ಸಹ ರಾಮಾಚಾರಿ, ಅಮೃತಧಾರೆ ಸೀರಿಯಲ್ ಅಲ್ಲದೆ ವಸಂತ ಕಾಲದ ಹೂಗಳು ಚಿತ್ರದಲ್ಲಿ ನಟಿಸಿದ್ದಾರೆ.
ಬಹುಭಾಷೆಗಳಲ್ಲಿ ತಯಾರಾಗುತ್ತಿರುವ ಬಬನ್ ಚಿತ್ರಕ್ಕೆ ವೀರೇಶ್ ಎನ್.ಟಿ.ಎ. ಅವರ ಕ್ಯಾಮೆರಾ ವರ್ಕ್, ಶಾಜಹಾನ್ ಅವರ ಸಂಗೀತ ಸಂಯೋಜನೆ ಹಾಗೂ ಚಂದನ್ ಅವರ ಸಂಕಲನವಿದೆ.
ಇದನ್ನೂ ಓದಿ : ಅರುಣ್ ಕಟಾರೆಯಿಂದ ಸ್ಯಾಂಡಲ್ವುಡ್ನ ಟೆಕ್ನಿಷನ್ಗೆ ಸಂಕಷ್ಟ- ಡಮ್ಮಿ ಗನ್ ಕೊಟ್ಟಿದ್ದ ಸಾಹಿಲ್ಗೆ ನೋಟಿಸ್ ಜಾರಿ..!