ಸ್ಯಾಂಡಲ್ವುಡ್ ಆಕ್ಷನ್ ಪ್ರಿನ್ಸ್ ಖ್ಯಾತಿಯ ನಟ ಧ್ರುವ ಸರ್ಜಾ ಜಿಮ್ ಟ್ರೈನರ್ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿತ್ತು. ಬೆಂಗಳೂರಿನ ಕೆ.ಆರ್. ರಸ್ತೆಯಲ್ಲಿ, ನಡು ರಸ್ತೆಯಲ್ಲಿಯೇ ಬೈಕ್ ಸವಾರರು ಜಿಮ್ ಟ್ರೈನರ್ ಪ್ರಶಾಂತ್ ಪೂಜಾರಿಯನ್ನು ಅಡ್ಡಗಟ್ಟಿ ಗಂಭೀರವಾಗಿ ಹಲ್ಲೆ ಮಾಡಿದ್ದರು.
ಈ ಪ್ರಕರಣ ತನಿಖೆಗೆ ಇಳಿದ ಬನಶಂಕರಿ ಪೊಲೀಸರು, ಇದೀಗ ಜಿಮ್ ಟ್ರೈನರ್ ಪ್ರಶಾಂತ್ ಪೂಜಾರಿ ಮೇಲೆ ನಡೆದ ಹಲ್ಲೆಯ ಸತ್ಯಾಂಶವನ್ನು ಬಯಲಿಗೆಳೆದಿದ್ದಾರೆ. ಜಿಮ್ ಟ್ರೈನರ್ ಪ್ರಶಾಂತ್ ಪೂಜಾರಿ ಧ್ರುವ ಸರ್ಜಾ ಜೊತೆ ಹತ್ತಿರವಾಗೋದಕ್ಕೆ ಈ ಅಟ್ಯಾಕ್ ನಡೆದೆ ಎಂಬುದು ತಿಳಿದು ಬಂದಿದೆ.
ಈ ಪ್ರಕರಣ ನಡೆದಾಗ ವಿಚಾರ ಗೊತ್ತಿಲ್ಲದೇ ಪೊಲೀಸರಿಗೆ ಕರೆ ಮಾಡಿದ್ದ ಧ್ರುವ ಸರ್ಜಾ, ನಮ್ಮ ಹುಡುಗನ ಮೇಲೆ ಹಲ್ಲೆ ಆಗಿದೆ. ತಪ್ಪಿತಸ್ಥರ ಪತ್ತೆ ಮಾಡಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿಕೊಂಡಿದ್ದರು.
ಆದರೆ ತನಿಖೆಗೆ ಇಳಿದ ಬನಶಂಕರಿ ಪೊಲೀಸರಿಂದ ಸತ್ಯ ಬಯಲಾಗಿದ್ದು, ಹರ್ಷ ಮತ್ತು ಸುಭಾಷ್ ಎಂಬವರು ಪ್ರಶಾಂತ್ ಪೂಜಾರಿ ಮೇಲೆ ಹಲ್ಲೆ ಮಾಡಿರುವುದು ಎಂದು ಗೊತ್ತಾಗಿದೆ. ಆದರೆ ಹಲ್ಲೆ ಮಾಡಿಸಿದ್ದು ಮಾತ್ರ ಧೃವ ಸರ್ಜಾ ಬಳಿ ಈ ಹಿಂದೆ ಕೆಲಸ ಮಾಡಿಕೊಂಡಿದ್ದ ನಾಗೇಂದ್ರ ಎಂದು ತಿಳಿದು ಬಂದಿದೆ.
ಇನ್ನು ಹಲ್ಲೆ ಮಾಡಿಸಿರುವ ನಾಗೇಂದ್ರ, ಧ್ರುವ ಸರ್ಜಾಗೆ ಚಾಲಕನಾಗಿಯು ಕೆಲಸ ಮಾಡ್ತಿದ್ದನು. ಪ್ರಶಾಂತ್ ಪೂಜಾರಿ ಇತ್ತೀಚೆಗೆ ಧ್ರುವ ಸರ್ಜಾಗೆ ಆಪ್ತನಾಗ್ತಿದ್ದ. ಇದು ನಾಗೇಂದ್ರನಿಗೆ ಸಹಿಸಿಕೊಳ್ಳಲು ಆಗ್ತಿರಲಿಲ್ಲ, ಹೀಗಾಗಿ ನಾಗೇಂದ್ರ ಕನಕಪುರ ಮೂಲದ ಹರ್ಷ ಮತ್ತು ಸುಭಾಷ್ರಿಂದ ಹಲ್ಲೆ ಮಾಡಿಸಿದ್ದನು.
ಸದ್ಯ ಬಂಧನ ಭೀತಿಯಿಂದ ಆರೋಪಿಗಳು ಜಾಮೀನು ಪಡೆದು ಹೊರ ಬಂದಿದ್ದಾರೆ. ಹಲ್ಲೆಯಾದಾಗಲು ದೂರು ನೀಡಲು ಹಿಂದೇಟಾಕಿದ್ದ ಪ್ರಶಾಂತ್ ಪೂಜಾರಿ ಈಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಸಹಕಾರ ಸಿಗುತ್ತಿಲ್ಲ. ಇದರೊಂದಿಗೆ ಜೊತೆಯಲ್ಲಿದ್ದ ಹುಡುಗರು ಗಲಾಟೆ ಮಾಡಿಕೊಂಡ ಬೇಜಾರಿನಲ್ಲೇ ಅಂತರಕಾಯ್ದು ಕೊಂಡಿರೋ ಧ್ರುವ ಸರ್ಜಾರಿಂದಲೂ ಪೊಲೀಸರಿಗೆ ಸರಿಯಾದ ಮಾಹಿತಿ ಸಿಗುತ್ತಿಲ್ಲ.
ಇದನ್ನೂ ಓದಿ : ನಟ ದರ್ಶನ್ಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ..!