ದಾವಣಗೆರೆ : ಲೋಕಸಭೆ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದೆ. ಆದರೆ ಎಲ್ಲಾ ಪಕ್ಷಗಳಲ್ಲಿ ಅಭ್ಯರ್ಥಿ ಘೋಷಣೆ ವಿಚಾರದಿಂದಾಗಿ ಪಕ್ಷದ ನಾಯಕ ನಡುವೆಯೇ ಒಳ ಜಗಳ ಶುರುವಾಗಿದೆ. ಅದೇ ರೀತಿ ದಾವಣಗೆರೆ ಲೋಕಸಭೆ ಕ್ಷೇತ್ರಕ್ಕೆ ಸಂಸದ ಜಿಎಂ ಸಿದ್ದೇಶ್ವರ್ ಪತ್ನಿ ಗಾಯತ್ರಿಗೆ ಟಿಕೆಟ್ ನೀಡಿರುವುದನ್ನು ಜಿಲ್ಲೆಯ ಮಾಜಿ ಸಚಿವರು ಸೇರಿ ಪ್ರಮುಖ ನಾಯಕರು ವಿರೋಧ ವ್ಯಕ್ತಪಡಿಸಿದ್ದರು. ಅಭ್ಯರ್ಥಿ ಬದಲಿಸದಿದ್ದರೆ ಬಂಡಾಯ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಾಗಿ ಘೋಷಿಸಿದ್ದರು.
ಹಾಗಾಗಿ ದಾವಣಗೆರೆ ಬಿಜೆಪಿಯಲ್ಲಿ ತಲೆ ದೋರಿರುವ ಬಂಡಾಯದ ಶಮನಕ್ಕೆ ಸ್ವತಃ ಮಾಜಿ ಮುಖ್ಯಮಂತ್ರಿ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿಎಸ್ ಯಡಿಯೂರಪ್ಪ ಪ್ರಯತ್ನ ಮಾಡಿದ್ದರು.
ಆದರೆ ಬಿಎಸ್ವೈ ಮನವೊಲಿಕೆ ನಂತರವೂ ದಾವಣೆಗೆರೆ ಬಿಜೆಪಿಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಜಿಲ್ಲೆಯ ಮುಖಂಡರು ಪ್ರಚಾರ ಮಾಡುತ್ತಿಲ್ಲ. ಇದೀಗ ದಾವಣಗೆರೆ ಜಿಲ್ಲೆಯಲ್ಲಿ ಗೊಂದಲ ಪರಿಹಾರವಾದ ಹಿನ್ನಲೆ ಬಂಡಾಯ ಶಮನಕ್ಕೆ ಮತ್ತೊಂದು ಸರ್ಕಸ್ ಶುರುವಾಗಿದೆ.
ಇಂದು ದಾವಣಗೆರೆಯಲ್ಲಿ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ದಾಸ್ ಮೀಟಿಂಗ್ ಮಾಡಲಿದ್ದಾರೆ. ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಪರ ಪ್ರಚಾರಕ್ಕೆ ಬಾರದೇ ಮುನಿಸು ತೋರಿರುವ ರೇಣುಕಾಚಾರ್ಯ, ಕರುಣಾಕರರೆಡ್ಡಿ ಸೇರಿದಂತೆ ಹಲವರ ಜೊತೆ ದಾವಣಗೆರೆಯ ಹೊರ ವಲಯದಲ್ಲಿರುವ ರೆಸಾರ್ಟ್ನಲ್ಲಿ ಸಭೆ ನಡೆಸಿ ಎಲ್ಲರನ್ನೂ ಮನವೊಲಿಸುವ ಪ್ರಯತ್ನ ರಾಧಾ ಮೋಹನ್ ದಾಸ್ ಮಾಡಲಿದ್ದಾರೆ.
ಇದನ್ನೂ ಓದಿ : ಜನರ ಆರೋಗ್ಯ ಕಾಪಾಡಬೇಕಿದ್ದ ವೈದ್ಯರಿಗೆ ಕಾಲರಾ ಅಟ್ಯಾಕ್ : 47 ವೈದ್ಯರಲ್ಲಿ ಕಾಣಿಸಿಕೊಂಡ ಕಾಲರಾ..!