ಆನೇಕಲ್ : ಬೃಹತ್ ಗಾತ್ರದ ತೇರು ಹುಸ್ಕೂರು ಮದ್ದೂರಮ್ಮ ಜಾತ್ರೆಗೆ ತೆರಳುವಾಗ ನಿಯಂತ್ರಣ ತಪ್ಪಿ ಕುಸಿದು ಬಿದ್ದ ಘಟನೆ ಬೆಂಗಳೂರು ಹೊರವಲಯದ ಆನೇಕಲ್ನಲ್ಲಿ ನಡೆದಿದೆ.
ನೂರಾರು ವರ್ಷಗಳ ಇತಿಹಾಸವಿರುವ ಮದ್ದೂರಮ್ಮ ಜಾತ್ರೆಗೆ ಭಕ್ತರು ಹೀಲಲಿಗೆ ಗ್ರಾಮದಿಂದ ತೇರು ಸಾಗಿಸುತ್ತಿದ್ದರು. ಸುಮಾರು 120 ಅಡಿ ಎತ್ತರದ ತೇರನ್ನು ಎತ್ತುಗಳು ಮತ್ತು ಟ್ರಾಕ್ಟರ್ಗಳ ನೆರವಿನಿಂದ ಎಳೆದು ತರಲಾಗುತ್ತಿತ್ತು.
ಈ ವೇಳೆ ತೇರು ಕಮ್ಮಸಂದ್ರದ ಹೈಪರ್ ಮಾರ್ಕೆಟ್ ತಿರುವಿನಲ್ಲಿ ನಿಯಂತ್ರಣ ತಪ್ಪಿ ಎಡಕ್ಕೆ ಉರುಳಿಬಿದ್ದಿದೆ. ಅದೃಷ್ಟವಶಾತ್ ಸುಮಾರು 120 ಅಡಿ ಎತ್ತರದ ತೇರು ಉರುಳಿ ಬಿದ್ದರೂ ಯಾವುದೇ ಸಾವುನೋವು ಸಂಭವಿಸಿಲ್ಲ.
ಇದನ್ನೂ ಓದಿ : ಬಿಬಿಎಂಪಿ ವ್ಯಾಪ್ತಿಯಲ್ಲಿ ಆತಂಕ ಮೂಡಿಸುತ್ತಿರುವ ಕಾಲರಾ : ಕಳೆದ ಒಂದು ವರ್ಷದಿಂದ ಕಾಲರಾ ಸೋಂಕಿತರ ಸಂಖ್ಯೆ ಹೆಚ್ಚಳ..!
Post Views: 223