Download Our App

Follow us

Home » ರಾಜಕೀಯ » ರಾಹುಲ್​ ಗಾಂಧಿ ಮತಬೇಟೆ ಬೆನ್ನಲ್ಲೇ ಕೇಸರಿ ನಾಯಕರ ಅಬ್ಬರ – ಏ.23, 24 ರಂದು ರಾಜ್ಯದಲ್ಲಿ ಅಮಿತ್​ ಶಾ, ಯೋಗಿ ಆದಿತ್ಯನಾಥ್ ಪ್ರಚಾರ..!

ರಾಹುಲ್​ ಗಾಂಧಿ ಮತಬೇಟೆ ಬೆನ್ನಲ್ಲೇ ಕೇಸರಿ ನಾಯಕರ ಅಬ್ಬರ – ಏ.23, 24 ರಂದು ರಾಜ್ಯದಲ್ಲಿ ಅಮಿತ್​ ಶಾ, ಯೋಗಿ ಆದಿತ್ಯನಾಥ್ ಪ್ರಚಾರ..!

ಬೆಂಗಳೂರು : ರಾಹುಲ್​ ಗಾಂಧಿ ಮತಬೇಟೆ ಬೆನ್ನಲ್ಲೇ ಕೇಸರಿ ನಾಯಕರ ಅಬ್ಬರ ಶುರುವಾಗಲಿದೆ. 23, 24 ರಂದು ರಾಜ್ಯದಲ್ಲಿ ಮೋದಿ, ಅಮಿತ್​ ಶಾ, ಜೆ.ಪಿ ನಡ್ಡಾ, ಯೋಗಿ ಆದಿತ್ಯನಾಥ್​ ಮತಬೇಟೆ ನಡೆಸಲಿದ್ದಾರೆ. ಬೆಂಗಳೂರು, ಚಿಕ್ಕಮಗಳೂರು, ತುಮಕೂರಿನಲ್ಲಿ ಅಮಿತ್​ ಶಾ ಕ್ಯಾಂಪೇನ್​ ಮಾಡಲಿದ್ದು, ಏಪ್ರಿಲ್​ 23ರಂದು ಯಶವಂತಪುರದಲ್ಲಿ ಅಮಿತ್​ ಶಾ ರೋಡ್​ ಶೋ ನಡೆಸಲಿದ್ದಾರೆ.

ಮರುದಿನ ಏಪ್ರಿಲ್​ 24 ರಂದು ಬೆಂಗಳೂರು, ಮಡಿಕೇರಿ, ಮಲ್ಪೆಯಲ್ಲಿ ಯೋಗಿ ಪ್ರಚಾರ ಮಾಡಲಿದ್ದಾರೆ. ಯಲಹಂಕದಲ್ಲಿ ಸಾರ್ವಜನಿಕ ಸಭೆ ನಡೆಸಿ, ಸಂಜೆ ಬೊಮ್ಮಾನಹಳ್ಳಿಯಲ್ಲಿ ರೋಡ್​ ಶೋ ನಡೆಸಲಿದ್ದಾರೆ. ಏಪ್ರಿಲ್​ 24ರಂದು ಚಿಕ್ಕಮಗಳೂರಿನಲ್ಲಿ ಸಾರ್ವಜನಿಕ ಸಭೆ, ತುಮಕೂರಿನಲ್ಲಿ ಸಮಾವೇಶ ನಡೆಯಲಿದೆ. ಕೇಸರಿ ರಣಕಲಿಗಳ ಪರ ಬಿಜೆಪಿಯ ದಿಗ್ಗಜರ ಮತಶಿಕಾರಿ ಶುರುವಾಗಲಿದ್ದು, ಬಿಜೆಪಿ ಲೀಡರ್ಸ್ ಬಿಜೆಪಿ ಅಭ್ಯರ್ಥಿಗಳ ಮತಯಾಚಿಸಲಿದ್ದಾರೆ. 

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಏಪ್ರಿಲ್ 24 ರಂದು ಕರ್ನಾಟಕದಲ್ಲಿ ಚುನಾವಣಾ ಪ್ರಚಾರ ಸಭೆಗಳಲ್ಲಿ ಭಾಗವಹಿಸಲಿದ್ದಾರೆ. ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರು ಬೆಳಗ್ಗೆ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಲ್ಲಿ ರೋಡ್ ಶೋ, ಮಧ್ಯಾಹ್ನ ಮಡಿಕೇರಿಯಲ್ಲಿ ಸಾರ್ವಜನಿಕ ಸಭೆ ಹಾಗೂ ಸಂಜೆ ಉಡುಪಿಯ ಮಲ್ಪೆಯಲ್ಲಿ ಸಾರ್ವಜನಿಕ ಸಭೆ ನಡೆಸಲಿದ್ದಾರೆ.

ಇದನ್ನೂ ಓದಿ : ಉಡುಪಿ : ಮನೆಯಲ್ಲಿ ಮತದಾನ ಮಾಡಿದ ಕೆಲವೇ ಕ್ಷಣಗಳಲ್ಲಿ ವೃದ್ಧೆ ಸಾ*ವು..!

Leave a Comment

DG Ad

RELATED LATEST NEWS

Top Headlines

ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ : ಪುರುಷರ ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕಕ್ಕೆ ಮುತ್ತಿಟ್ಟ ನವದೀಪ್ ಸಿಂಗ್..!

ಪ್ಯಾರಿಸ್ : ಪ್ಯಾರಾಲಿಂಪಿಕ್ಸ್​ನಲ್ಲಿ ಶನಿವಾರ ನಡೆದ ಪುರುಷರ ಜಾವೆಲಿನ್ ಥ್ರೋ ಎಫ್​41 ಸ್ಪರ್ಧೆಯಲ್ಲಿ ಭಾರತದ ಜಾವೆಲಿನ್ ಎಸೆತಗಾರ ನವದೀಪ್ ಸಿಂಗ್ ಚಿನ್ನದ ಪದಕ ಗೆದ್ದಿದ್ದಾರೆ. 47.32 ಮೀಟರ್‌ ದೂರಕ್ಕೆ

Live Cricket

Add Your Heading Text Here