ಬೆಂಗಳೂರು : ಮಹಿಳೆಗೆ ಅತ್ಯಾಚಾರ ಎಸುಗುವುದಾಗಿ ಹೇಳಿ ಬೆದರಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಕೆಆರ್ಎಸ್ ಪಕ್ಷದ ಯುವ ಘಟಕದ ಅಧ್ಯಕ್ಷನನ್ನು ಪೊಲೀಸರು ಬಂಧಿಸಿದ್ದಾರೆ. ಮಹಾದೇವಪುರ ವಿಧಾನಸಭಾ ಕ್ಷೇತ್ರದ ಯುವ ಘಟಕದ ಅಧ್ಯಕ್ಷ ಶ್ರೀನಿವಾಸ ಬಂಧಿತ ಆರೋಪಿ.
ಈ ಹಿಂದೆ ಮದುವೆಯಾಗಿ ವಿಚ್ಛೇದನೆ ಪಡಿದಿದ್ದ ಆರೋಪಿ ಶ್ರೀನಿವಾಸ ಜೊತೆಗೆ ಸಲುಗೆಯಿಂದ ಇದ್ದ ಮಹಿಳೆಗೆ ಖಾಸಗಿ ಪೋಟೋ ಇಟ್ಕೊಂಡು ಬೆದರಿಕೆ ಹಾಕಿದ್ದನು. ಇಷ್ಷೇ ಅಲ್ಲದೇ ಜುಲೈ ೧ನೇ ತಾರೀಖು ಕಾಡುಗೋಡಿ ಮೇಟ್ರೋ ನಿಲ್ದಾಣ ಮುಂದೆ ಅಸಜರರ ಜೊತೆಗೆ ಬಂದು ವಿಡಿಯೋಗಳ ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದನು.
ಆರೋಪಿ ಬೆದರಿಕೆ ಹಾಕಿದ ಹಿನ್ನಲೆಯಲ್ಲಿ ನೊಂದ ಯುವತಿ ಶ್ರೀನಿವಾಸ ವಿರುದ್ಧ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ದೂರಿನ ಬೆನ್ನಲ್ಲೇ ಪೊಲೀಸರು ಕೆಆರ್ಎಸ್ ಪಕ್ಷದ ಅಧ್ಯಕ್ಷ ಶ್ರೀನಿವಾಸನನ್ನು ಅರೆಸ್ಟ್ ಮಾಡಿದ್ದಾರೆ.
ಇದನ್ನೂ ಓದಿ : ರೀಲ್ಸ್ನಿಂದಲೇ ಫಜೀತಿಗೆ ಸಿಲುಕಿದ ನಾನು ನಂದಿನಿ ಖ್ಯಾತಿಯ ವಿಕಿಪೀಡಿಯ ವಿಕಾಸ್..!
Post Views: 81