Download Our App

Follow us

Home » ರಾಜಕೀಯ » ನೇಹಾ ಹ*ತ್ಯೆ ಹಿಂದಿನ ಸತ್ಯಾಸತ್ಯತೆ ABVPಗೆ ಗೊತ್ತಿಲ್ಲ, ಬಿಜೆಪಿ ಇದರಲ್ಲಿ ರಾಜಕೀಯ ಮಾಡ್ತಿದೆ : ಡಾ.ಜಿ.ಪರಮೇಶ್ವರ್​​..!

ನೇಹಾ ಹ*ತ್ಯೆ ಹಿಂದಿನ ಸತ್ಯಾಸತ್ಯತೆ ABVPಗೆ ಗೊತ್ತಿಲ್ಲ, ಬಿಜೆಪಿ ಇದರಲ್ಲಿ ರಾಜಕೀಯ ಮಾಡ್ತಿದೆ : ಡಾ.ಜಿ.ಪರಮೇಶ್ವರ್​​..!

ಬೆಂಗಳೂರು : ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠ್ ಬರ್ಬರ ಕೊಲೆ ಪ್ರಕರಣ ರಾಜ್ಯಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಕೊಲೆ ಪ್ರಕರಣದಲ್ಲಿ ಪೊಲೀಸರು ಆರೋಪಿ ಫಯಾಜ್‌ನನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿ ಫಯಾಜ್​​ಗೆ ಕಠಿಣ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿ ರಾಜ್ಯಾದ್ಯಂತ ಪ್ರತಿಭಟನೆ ಕೂಡ ನಡೆಯುತ್ತಿದೆ. ಹೀಗಿರುವಾಗಲೇ ನೇಹಾ ಕೊಲೆ ವೈಯಕ್ತಿಕ ಎಂಬ ಹೇಳಿಕೆ ನೀಡಿರುವ ಗೃಹ ಸಚಿವ ಪರಮೇಶ್ವರ್ ವಿರುದ್ಧ ಎಬಿವಿಪಿ ಹಾಗೂ ಹಿಂದೂ ಪರ ಸಂಘನೆಗಳು ನೇಹಾ ಕೊಲೆ ಸಂಬಂಧ ತಾವು ಕೊಟ್ಟ ಹೇಳಿಕೆ ವಾಪಸ್ ಪಡೆಯಲು ಆಗ್ರಹಿಸಿ
ಪರಮೇಶ್ವರ್ ಮನೆಗೆ ಮುತ್ತಿಗೆ ಹಾಕಲು ಮುಂದಾಗಿದ್ದವು.

ಇದೀಗ ಎಬಿವಿಪಿ ಪ್ರತಿಭಟನೆ ಬಳಿಕ ಬೆಂಗಳೂರಿನಲ್ಲಿ ಹೇಳಿಕೆ ನೀಡದ ಗೃಹ ಸಚಿವ ಪರಮೇಶ್ವರ್ ಅವರು, ನೇಹಾ ಹತ್ಯೆ ಹಿಂದಿನ ಸತ್ಯಾಸತ್ಯತೆ ABVPಗೆ ಗೊತ್ತಿಲ್ಲ. ಬಿಜೆಪಿಯವರು ಈ ಪ್ರಕರಣವನ್ನು ರಾಜಕೀಯ ಮಾಡ್ತಿದ್ದಾರೆ. ನಮ್ಮ ಸರ್ಕಾರಕ್ಕೂ ಜವಾಬ್ದಾರಿ ಅನ್ನೋದು ಇದೆ. ನೇಹಾ ಹತ್ಯೆ ಪ್ರಕರಣದ ತನಿಖೆ ನಡೆಯುತ್ತಿದೆ. ನಮಗೆ ಬಂದ ವರದಿಯಲ್ಲಿ ಏನಿತ್ತೋ ಅದನ್ನೇ ಹೇಳಿದ್ದೇವೆ. ಇನ್ನು ನನ್ನ ಹೇಳಿಕೆಯಿಂದ ನೇಹಾ ಕುಟುಂಬಕ್ಕೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುವೆ ಎಂದು ತಿಳಿಸಿದ್ದಾರೆ.

ನೇಹಾ ಕೊಲೆ ಪ್ರಕರಣದ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು, ನೇಹಾ ಕೊಲೆ ಪ್ರಕರಣದ ಆರೋಪಿಗೆ ಕಾನೂನು ಪ್ರಕಾರ ಏನ್​ ಆಗ್ಬೇಕೋ ಅದು ಆಗೇ ಆಗುತ್ತೆ. ತಪ್ಪು ಮಾಡಿದವರನ್ನು ಒದ್ದು ಒಳಗೆ ಹಾಕ್ತಾರೆ. ನಮ್ಮ ಮಿನಿಸ್ಟರ್​​ಗಳು ಹುಬ್ಬಳ್ಳಿಗೆ ಹೋಗ್ತಾ ಇದ್ದಾರೆ. ಹೋಂ ಮಿನಿಸ್ಟರ್​ ಇದ್ದಾರೆ.. ಎಲ್ಲಾ ಡೀಲ್​ ಮಾಡ್ತಾರೆ. ವೈಯಕ್ತಿಕ ಕಾರಣಗಳು ಏನಿವೆಯೋ ಗೊತ್ತಿಲ್ಲ ಎಂದು ಡಿಕೆಶಿ ಹೇಳಿದ್ದಾರೆ.

ಇದನ್ನೂ ಓದಿ : ರೌಡಿಶೀಟರ್ ಜೊತೆ ಲಿಂಕ್​ನಲ್ಲಿದ್ದ ಆರೋಪ : ಬೆಂಗಳೂರಿನ ಸಿಸಿಬಿ ಇನ್ಸ್​ಪೆಕ್ಟರ್ ಸೇವೆಯಿಂದ ಅಮಾನತು..!

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here