ಚಿಕ್ಕಬಳ್ಳಾಪುರ : ಲೋಕಸಭೆ ಚುನಾವಣಾ ಅಖಾಡ ರಂಗೇರಿದ್ದು, ಚಿಕ್ಕಬಳ್ಳಾಪುರದಿಂದ ಎಸ್.ಆರ್ ವಿಶ್ವನಾಥ್ಗೆ ಟಿಕೆಟ್ ಕೊಡಿ ಎಂದು ಚಿಕ್ಕಬಳ್ಳಾಪುರ ಕ್ಷೇತ್ರದಾದ್ಯಂತ ಬಿಜೆಪಿ ಕಾರ್ಯರ್ತರು ಆಗ್ರಹಿಸಿದ್ದಾರೆ. ಯಾವ ಕಾರಣಕ್ಕೂ ಡಾ. ಕೆ ಸುಧಾಕರ್ಗೆ ಟಿಕೆಟ್ ಕೊಡಬಾರದು ಎಂದು ಘೋಷಿಸಿದ್ದಾರೆ.
ಅಲೋಕ್ – ಸುಧಾಕರ್ ಫೈಟ್ನಲ್ಲಿ ಪಕ್ಷಕ್ಕೆ ಧಕ್ಕೆಯಾಗಬಾರದು. ಇಬ್ಬರಿಗೂ ಬೇಡ, ವಿಶ್ವನಾಥ್ ಅವರಿಗೇ ಟಿಕೆಟ್ ನೀಡಲು ಬಿಜೆಪಿ ಕಾರ್ಯರ್ತರು ಆಗ್ರಹಿಸಿದ್ದಾರೆ. ಕಾರ್ಯಕರ್ತರ ಆಗ್ರಹದ ಬೆನ್ನಲ್ಲೇ ಸುಧಾಕರ್ ವಿರುದ್ಧ ವಿಶ್ವನಾಥ್ ಸಿಡಿದೆದ್ದಿದ್ದಾರೆ. ಸುಧಾಕರ್ ಎಲೆಕ್ಷನ್ ಸೋತು ಜನರಿಂದ ದೂರ ಇದ್ದಾರೆ. ನನ್ನ ಮಗ ಅಲೋಕ್ ಬೇಡ ಅನ್ನೋದಾದ್ರೆ ನನ್ನನ್ನೇ ಅಭ್ಯರ್ಥಿ ಮಾಡಿ, ನಮ್ಮ ಕ್ಷೇತ್ರದಲ್ಲೇ ಒಂದೂವರೆ ಲಕ್ಷ ವೋಟ್ ಲೀಡ್ ಕೊಡ್ತೇವೆ ಎಂದು ಬಿಜೆಪಿ ಕಾರ್ಯಕರ್ತರು ಹೇಳಿದ್ದಾರೆ.
ಸುಧಾಕರ್ ಅಧಿಕಾರದಲ್ಲಿದ್ದಾಗ ಹೇಗೆ ನಡೆದುಕೊಂಡಿದ್ರು ಎಲ್ಲರಿಗೂ ಗೊತ್ತು, ಅಂತಹ ವ್ಯಕ್ತಿಗೆ ಮತ್ತೆ ಅಧಿಕಾರ ನೀಡಿದರೆ ಗೊಂದಲ ಹೆಚ್ಚಾಗುತ್ತದೆ ಎಂದು ಶಾಸಕ ಎಸ್.ಆರ್.ವಿಶ್ವನಾಥ್ ಕಿಡಿ ಕಾರಿದ್ದಾರೆ.
ಇದನ್ನೂ ಓದಿ : ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಮರದ ಕೊಂಬೆ ಬಿದ್ದು ಬೈಕ್ ಸವಾರನ ಬೆನ್ನು ಮೂಳೆ ಮುರಿತ : ಖಾಸಗಿ ಶಾಲೆ, BBMP ವಿರುದ್ಧ FIR..!