ಬೆಂಗಳೂರು : ಟ್ರಾಫಿಕ್ ಕಾನ್ಸ್ಟೇಬಲ್ಗೆ ಬೈಕ್ ಸವಾರ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಘಟನೆ ಸದಾಶಿನಗರ ಠಾಣಾ ವ್ಯಾಪ್ತಿಯ ಪಿ.ಎಸ್.ಜಂಕ್ಷನ್ನಲ್ಲಿ ಘಟನೆ ನಡೆದಿದೆ. ಹಲ್ಲೆ ಮಾಡಿದ ಬೈಕ್ ಸವಾರ ಪ್ರತೀಕ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಬೈಕ್ ಸವಾರ ಪ್ರತೀಕ್ ರಾತ್ರಿ 8.30ರ ಸುಮಾರಿಗೆ ಸಿಗ್ನಲ್ ಜಂಪ್ ಮಾಡಿ ಕಾನ್ಸ್ ಟೇಬಲ್ ನಿಂತಿದ್ದ ಐಲ್ಯಾಂಡ್ ಬಳಿ ಬಂದು ನಿಮಗೆ ಸರಿಯಾಗಿ ಸಿಗ್ನಲ್ ಕೊಡುವುದಕ್ಕೆ ಆಗೋದಿಲ್ಲ ಎಂದು ಜಗಳ ತೆಗೆದಿದ್ದಾನೆ. ಇದೇ ಸಂದರ್ಭ ಪ್ರತೀಕ್ ಜೊತೆಗಿದ್ದ ಯುವತಿ ಜಗಳ ಬೇಡ ಎಂದು ಪ್ರತೀಕ್ ನನ್ನು ಸಮಾಧಾನ ಮಾಡಿದ್ದಾಳೆ.
ಅದರೆ ಸಮಾಧಾನಗೊಳ್ಳದ ಪ್ರತೀಕ್ ಕಾನ್ಸ್ಟೇಬಲ್ ಶಿವರಾಜ್ ಗೆ ಅವಾಚ್ಯವಾಗಿ ನಿಂದಿಸಿ ಸ್ಥಳದಿಂದ ಎಸ್ಕೇಪ್ ಆಗಲು ಪ್ರಯತ್ನಿಸಿದ್ದಾನೆ. ಇದೇ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ಬೈಕ್ ಸವಾರನನ್ನು ಹಿಡಿಯಲು ಮುಂದಾದ ಕಾನ್ಸ್ಟೇಬಲ್ ಶಿವರಾಜ್ ಗೆ ಪ್ರತೀಕ್ ಕೈಯಿಂದ ಹೊಡೆದು ಹಲ್ಲೆ ಮಾಡಿ ಬಳಿಕ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ.
ಇನ್ನು ಎಸ್ಕೇಪ್ ಆಗ್ತಿದ್ದ ಪ್ರತೀಕ್ ನನ್ನ ಕೋಬ್ರಾ ಸಿಬ್ಬಂದಿ ಮತ್ತು ಸಾರ್ವಜನಿಕರು ಹಿಡಿದು ಸದಾಶಿನಗರ ಠಾಣಾ ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಹಲ್ಲೆ ಮಾಡಿದ ಬೈಕ್ ಸವಾರ ಪ್ರತೀಕ್ ನನ್ನು ಬಂಧಿಸಿ ಆತನ ವಿರುದ್ಧ FIR ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ : ಮಾಜಿ ಸಿಎಂ ಹೆಚ್ಡಿಕೆಗೆ ಹೃದಯ ಶಸ್ತ್ರಚಿಕಿತ್ಸೆ- ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಆಪರೇಷನ್ ಆರಂಭ..!