ಬೆಂಗಳೂರು : ಗೆಳತಿ ಜೊತೆ ನಟಿ ಅನಿತಾ ಭಟ್ ಅವರು ನಾಯಿಯನ್ನು ಹಿಡಿದುಕೊಂಡು ಹೋಗುವಾಗ ಅದು ಬೊಗಳಿದೆ ಎಂದು ಕೆಲವರು ಜಗಳ ತೆಗೆದಿದ್ದಾರೆ. ಈ ಹಿನ್ನೆಲೆಯಿಂದಾಗಿ ನಟಿ ಸಂಪಿಗೆಹಳ್ಳಿ ಠಾಣೆಗೆ ಹೋಗಿ ದೂರು ದಾಖಲು ಮಾಡಲು ಮುಂದಾಗಿದ್ದಾರೆ.
ನಟಿ ಅನಿತಾ ಭಟ್ ಜಕ್ಕೂರು ಬಳಿ ತನ್ನ ಗೆಳತಿಯ ಜೊತೆ ನಾಯಿ ಹಿಡಿದುಕೊಂಡು ಹೋಗ್ತಿದ್ದರು. ಈ ವೇಳೆ ನಾಯಿ ಬೊಗಳಿದೆ ಅಂತಾ ಕೆಲವರು ಕಿರಿಕ್ ತೆಗೆದಿದ್ದಾರೆ. ನಟಿ ಮತ್ತು ಸ್ನೇಹಿತೆ ಕ್ಷಮೆಯಾಚಿಸಿ ಸಮಸ್ಯೆ ಬಗೆಹರಿಸೋದಕ್ಕೆ ಮುಂದಾಗಿದ್ದರು. ಆದ್ರೆ ಕ್ಷಮೆ ಕೇಳಿದ್ರೂ ಮತ್ತೆ ಅನಿತಾ ಭಟ್ ಮತ್ತು ಅವರ ಸ್ನೇಹಿತೆಗೆ ಕೆಲವರು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ನಂತರ ಇಬ್ಬರು ಕಾರಿನಲ್ಲಿ ಕುಳಿತುಕೊಂಡರೂ ಕಲ್ಲು ಎತ್ತಿಕೊಂಡು ಕಾರ್ ಗ್ಲಾಸ್ ಒಡೆಯಲು ಬಂದಿದ್ದಾರೆ ಎಂದು ಆರೋಪ ಮಾಡಲಾಗಿದೆ. ಹೀಗಾಗಿ ಅನಿತಾ ಭಟ್ ಅವರು ನಾಲ್ಕೈದು ಮಂದಿಯ ವಿರುದ್ಧ ದೂರು ನೀಡಲು ಸಂಪಿಗೆಹಳ್ಳಿಯ ಠಾಣೆಗೆ ತೆರಳಿದ್ದಾರೆ.
ಇದನ್ನೂ ಓದಿ : ಪೋಸ್ಟರ್ನಲ್ಲೇ ಕುತೂಹಲ ಮೂಡಿಸಿದೆ ಝೈದ್ ಖಾನ್ ನಟನೆಯ ನೂತನ ಚಿತ್ರ..!