ಬೆಂಗಳೂರು : ಬಿಬಿಎಂಪಿ ಅಕ್ರಮ ಖಾತಾ ಹಗರಣ ಸಂಬಂಧ ಇಬ್ಬರು ಅಧಿಕಾರಿಗಳ ವಿರುದ್ಧ FIR ದಾಖಲಾಗಿದೆ. ಅಕ್ರಮವಾಗಿ ಖಾತಾ ಹಗರಣ ಮಾಡಿದ್ದ ಕಂದಾಯಾಧಿಕಾರಿ ಬಸವರಾಜ ಮಗಿ ಅರೆಸ್ಟ್ ಆಗಿದ್ದರು. ಮತ್ತೊಬ್ಬ ಸಹಾಯಕ ಕಂದಾಯ ಅಧಿಕಾರಿ ದೇವರಾಜ್ ನಾಪತ್ತೆಯಾಗಿದ್ದರು. ಇದೀಗ ಆರ್. ಆರ್ ನಗರ ಜಂಟಿ ಆಯುಕ್ತರ ದೂರಿನ ಮೇರೆಗೆ ಇವರಿಬ್ಬರ ವಿರುದ್ಧ FIR ದಾಖಲಾಗಿದೆ.
ಬಸವರಾಜ ಮಗಿ ಹಾಗೂ ದೇವರಾಜ್ 200ಕ್ಕೂ ಹೆಚ್ಚು ಖಾತೆ ನಕಲಿ ಮಾಡಿದ್ದ ಆರೋಪ ಕೇಳಿಬಂದಿದೆ. ಅರೆಸ್ಟ್ ಆಗಿದ್ದ ಬಸವರಾಜ ಮಗಿ ಅನಾರೋಗ್ಯ ನೆಪ ಹೇಳಿ ಜೈಲಿನಿಂದ ತಪ್ಪಿಸಿಕೊಂಡಿದ್ದರು. ಇವರು ಆಸ್ಪತ್ರೆಗೆ ದಾಖಲಾದ ಬಳಿಕ ಜೈಲ್ಗೆ ಶಿಫ್ಟ್ ಆಗುವ ಸಾಧ್ಯತೆಯಿದೆ.
ಸಹಾಯಕ ಕಂದಾಯ ಅಧಿಕಾರಿ ದೇವರಾಜ್ ನಾಪತ್ತೆಯಾಗಿದ್ದು, ಆರ್ .ಆರ್ ನಗರ ಪೊಲೀಸರಿಂದ ದೇವರಾಜ್ ಪತ್ತೆಗೆ ತಂಡ ರಚನೆಯಾಗಿದೆ. ಇನ್ನೂ ಈ ಅಕ್ರಮಕ್ಕೆ ಸಾಥ್ ಕೊಟ್ಟ ಮತ್ತಷ್ಟು ಅಧಿಕಾರಿ, ಸಿಬ್ಬಂದಿ ಕೂಡ ಅರೆಸ್ಟ್ ಆಗುವ ಸಾಧ್ಯತೆಯಿದೆ. ಬಿ ಖಾತಾಗಳಿಗೆ ಅಕ್ರಮವಾಗಿ ಎ ಖಾತ ನೀಡಿ ಕೋಟಿ-ಕೋಟಿ ಲೂಟಿ ಆರೋಪ ಮಾಡಿರುವ ಆರೋಪ ವ್ಯಕ್ತವಾಗಿದೆ.
ಇದನ್ನೂ ಓದಿ : ಬೆಂಗಳೂರು ಗ್ರಾಮಾಂತರಕ್ಕೆ ಮೈತ್ರಿ ಅಭ್ಯರ್ಥಿ ಬಗ್ಗೆ ಮಹತ್ವದ ಚರ್ಚೆ ನಡೆಸಿದ ಬಿಜೆಪಿ, ಜೆಡಿಎಸ್ ನಾಯಕರು..!