ಬೆಂಗಳೂರು : ಬೆಂಗಳೂರು ಟನೆಲ್ ರಸ್ತೆಗೆ ಆರಂಭದಲ್ಲೇ ತೀವ್ರ ವಿರೋಧ ವ್ಯಕ್ತವಾಗಿದೆ. ಏರ್ಪೋರ್ಟ್ ರಸ್ತೆಯಲ್ಲಿ ಸುರಂಗ ಮಾರ್ಗ ನಿರ್ಮಾಣಕ್ಕೆ BBMP ಪ್ಲಾನ್ ನಡೆಸಿದೆ. 193 ಮೀ. ಸುರಂಗ ಮಾರ್ಗದ ಬಗ್ಗೆ ಡಿಸಿಎಂ ಹೇಳಿಕೆ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತವಾಗಿದೆ.
ಸುರಂಗ ರಸ್ತೆ ಬೇಡ ಎಂದು ಆನ್ ಲೈನ್ ಸಿಗ್ನೇಚರ್ ಕ್ಯಾಂಪೇನ್ ಶುರು ಮಾಡಿದ್ದಾರೆ. ಕ್ಯಾಂಪೇನ್ ಮೂಲಕ ಸಹಿ ಸಂಗ್ರಹಿಸಿ ಸಿಎಂಗೆ ನೀಡಲು ತಯಾರಿ ನಡೆಸಿದ್ದಾರೆ. ಟನೆಲ್ ರಸ್ತೆ ನಿರ್ಮಾಣಕ್ಕೆ ಸ್ಥಳೀಯರು, ಸಾರಿಗೆ ತಜ್ಞರು, ಪರಿಸರವಾದಿಗಳಿಂದ ವಿರೋಧ ವ್ಯಕ್ತವಾಗಿದೆ. ಸುರಂಗ ಮಾರ್ಗ ಪರಿಸರದ ಹಾನಿಗೆ ಕಾರಣವಾಗುತ್ತೆ, 1 ಕಿ.ಮೀಗೆ 500 ಕೋಟಿ ಖರ್ಚು ಇದೆ, ಅಷ್ಟು ದುಬಾರಿ ಸುರಂಗ ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ.
ಸುರಂಗ ರಸ್ತೆ ನಿರ್ಮಾಣದಿಂದ ಪರಿಸರದ ಮೇಲೆ ಪರಿಣಾಮ ಬೀರಲಿದೆ, ಅಂತರ್ಜಲ ಕುಸಿತವಾಗ್ತಿದೆ. ನೀರಿನ ಪೂರೈಕೆ ಬಿಕ್ಕಟ್ಟು ಆಗಿದೆ, ವಾಹನಗಳ ಸಂಖ್ಯೆ ನಿಯಂತ್ರಣ ಆಗಬೇಕು ಹೀಗೆ ಹಲವು ಕಾರಣ ಮುಂದಿಟ್ಟುಕೊಂಡು ಕ್ಯಾಂಪೇನ್ ಮಾಡಿದ್ದಾರೆ.
ಇದನ್ನೂ ಓದಿ : ಮಂಗಳೂರು ಬಿಜೆಪಿ ಅಭ್ಯರ್ಥಿ ರೇಸ್ನಲ್ಲಿರೋ ವಕೀಲ ಅರುಣ್ ಶ್ಯಾಮ್ಗೆ ಸೂಲಿಬೆಲೆ ಹೊಗಳಿಕೆ ಸುರಿಮಳೆ..!