ಬೆಂಗಳೂರು : ಬೆಂಗಳೂರು ಹೊರ ವಲಯದಲ್ಲಿ ವ್ಹೀಲಿಂಗ್ ಹುಚ್ಚಾಟಕ್ಕೆ ಯುವಕನೋರ್ವ ಬಲಿಯಾಗಿದ್ದಾನೆ. ನೆಲಮಂಗಲದಲ್ಲಿ ನಿನ್ನೆ ರಾತ್ರಿ ವೀಲ್ಹಿಂಗ್ ಮಾಡ್ತಿರುವಾಗ ಬೈಕ್ಗೆ ಬೈಕ್ ಟಚ್ ಆಗಿ ಯುವಕ ಸಾವನ್ನಪ್ಪಿದ್ದಾನೆ.
ದಾಸರಹಳ್ಳಿ ಮೂಲದ 20 ವರ್ಷದ ರಾಜೇಶ್ ಮೃತ ಯುವಕನಾಗಿದ್ದಾನೆ. ನಿನ್ನೆ ರಾತ್ರಿ 50ಕ್ಕೂ ಹೆಚ್ಚು ಪುಂಡರು ಬೈಕ್ನಲ್ಲಿ ವೀಲ್ಹಿಂಗ್ ಮಾಡಿದ್ದು, ರಾಷ್ಟ್ರೀಯ ಹೆದ್ದಾರಿಯ ನವಯುಗ ಟೋಲ್ ಬಳಿ ಈ ದುರಂತ ಸಂಭವಿಸಿದೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ವ್ಹೀಲಿಂಗ್ ಮಾಡುವ ಪುಂಡರ ಹಾವಳಿ ಹೆಚ್ಚಾಗಿದೆ. ರಾತ್ರಿ ಹೊತ್ತು ಯುವಕರು ವ್ಹೀಲಿಂಗ್ ಮಾಡ್ತಿರುವ ವಿಡಿಯೋ ಸಾರ್ವಜನಿಕರ ಮೊಬೈಲ್ನಲ್ಲಿ ಹರಿದಾಡುತ್ತಿವೆ. ಪುಂಡರ ವ್ಹೀಲಿಂಗ್ನಿಂದಾಗಿ ವಾಹನ ಸವಾರರಿಗೆ ತೊಂದರೆ ಆಗ್ತಿದೆ. ದಾಸರಹಳ್ಳಿಯಿಂದ ನೆಲಮಂಗಲದವರೆಗೆ ಹೆದ್ದಾರಿಯಲ್ಲೇ ಪುಂಡರು ವ್ಹೀಲಿಂಗ್ ಮಾಡ್ತಿದ್ದಾರೆ.
ಇದನ್ನೂ ಓದಿ : ನಾಳೆ ರಾಜ್ಯಸಭೆ ಚುನಾವಣೆ : ಇಂದು ಸಂಜೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆದ ಸಿಎಂ ಸಿದ್ದರಾಮಯ್ಯ..!