ಮೈಸೂರು : ಬಂಡೀಪುರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ. ರಮೇಶ್ ಕುಮಾರ್ ವಿರುದ್ಧ ಪರಿಸರವಾದಿಗಳಿಂದ ಆಕ್ರೋಶ ಭುಗಿಲೆದ್ದಿದೆ. ರಮೇಶ್ ಕುಮಾರ್ ವಿರುದ್ಧ ವ್ಯಾಪಕ ಭ್ರಷ್ಟಾಚಾರ ಆರೋಪ ಕೇಳಿಬಂದಿದೆ. ರಮೇಶ್ ಕುಮಾರ್ ವಿರುದ್ದ ಲೋಕಾಯುಕ್ತ ತನಿಖೆ ನಡೆಸಿದ್ದು, ಅಧಿಕಾರಿ ತನಿಖೆಗೂ ಸಂರಕ್ಷಣಾಧಿಕಾರಿ ಡಾ. ರಮೇಶ್ ಕುಮಾರ್ ಜಗ್ಗಲಿಲ್ಲ.
ರಮೇಶ್ ಕುಮಾರ್ನ್ನು ವರ್ಗಾವಣೆ ಮಾಡಿದರೂ ಸಿಎಟಿಯಿಂದ ತಡೆ ಹೇರಿದೆ. ಸಿಎಟಿ ಆದೇಶದ ಪ್ರಕಾರ ಫೆಬ್ರವರಿ 19ಕ್ಕೆ ಎರಡು ವರ್ಷ ಅವಧಿ ಪೂರ್ಣವಾಗಿದೆ. ಅವಧಿ ಪೂರ್ಣಗೊಂಡ ನಂತರವೂ ರಮೇಶ್ ಕುಮಾರ್ ಅಧಿಕಾರದಲ್ಲಿ ಮುಂದುವರಿದಿದ್ದು, ಬಂಡೀಪುರ ವ್ಯಾಪ್ತಿಯ ಆರ್.ಎಫ್.ಒ ಗಳಿಗೆ ರಮೇಶ್ ಕುಮಾರ್ ಕಿರುಕುಳ ನೀಡಿದ್ದಾನೆ ಎಂಬ ಅರೋಪ ಕೇಳಿಬಂದಿದೆ.
ಬಂಡೀಪುರ ಅಭಯಾರಣ್ಯ ನಿರ್ವಹಣೆಗೆ ಸರ್ಕಾರ ಹಾಗೂ ಟೈಗರ್ ಫೌಂಡೇಷನ್ ನಿಂದ ಕೋಟಿಗಟ್ಟಲೆ ಹಣ ಬಂದಿದ್ದು, ಹಣ ಬಂದರೂ ಅಧಿಕಾರಿಗಳ ನಿರ್ವಹಣೆಗೆ ಅಧಿಕಾರಿ ಹಣದ ಕೊಡಲಿಲ್ಲ. ಅಷ್ಟೇ ಅಲ್ಲದೆ ಸಫಾರಿ ಜೀಪ್ ಗಳನ್ನು ದುಸ್ಥಿತಿಗೆ ತಂದಿದ್ದು, ಟೈರ್ ಗಳು ಸವೆದರೂ ಬದಲಿಸದ ತಾತ್ಸಾರ ಮಾಡಿದ್ದಾನೆ.
ಅರಣ್ಯದಂಚಿನ ರೈತರಿಗೆ ಪಟಾಕಿ ಸಿಡಿಸಲು ಅರಣ್ಯ ಇಲಾಖೆ ಹಣ ಕೊಡುತ್ತಿತ್ತು. ರಮೇಶ್ ಕುಮಾರ್ ಇದೆಲ್ಲವನ್ನೂ ಬಂದ್ ಮಾಡಿ ರೈತರನ್ನು ರೊಚ್ಚಿಗೆಬ್ಬಿಸಿದ್ದಾನೆ. ರಮೇಶ್ ಕುಮಾರ್ ತಮಿಳುನಾಡು ಮೂಲದ ಐ.ಎಫ್.ಎಸ್. ಅಧಿಕಾರಿಯಾಗಿದ್ದು. ಈತ ತಮಿಳುನಾಡಿನ ಅರಣ್ಯ ಸಂಶೋಧಕರಿಗೆ ರಾಜಾತಿಥ್ಯ ನೀಡಿದ್ದು, ಕನ್ನಡಿಗ ಸಂಶೋಧಕರಿಗೆ ಅಸಹಕಾರ ತೋರಿದ್ದಾನೆ.
ಸಫಾರಿ ಹಣದಲ್ಲೂ ಲೂಟಿ ಮಾಡಿದ್ದು, ಯಾವುದಕ್ಕೂ ರಶೀದಿ ಕೊಡದೆ ಭ್ರಷ್ಟಾಚಾರ ಮಾಡಿದ್ದಾನೆ. ಸಿಎಫ್ ತನಗೆ ಬೇಕಾದ ಅಧಿಕಾರಿಗಳಿಗೆ ಮಣೆ ಹಾಕಿ, ಉಳಿದವರಿಗೆ ಹಿಂಸೆ ನೀಡುತ್ತಿದ್ದಾನೆ. ಈ ಬಗ್ಗೆ ಪರಿಸರವಾದಿ ಜೋಸೆಫ್ ಪೂವರ್ ಪ್ರತಿಕ್ರಿಯಿಸಿ ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ : ಏರ್ ಇಂಡಿಯಾ ಸಿಬ್ಬಂದಿಗೆ ಟೆರರಿಸ್ಟ್ ಎಂದು ಬೆದರಿಕೆ ಹಾಕಿದ ಪ್ರಯಾಣಿಕ : ಆರೋಪಿ ಪೊಲೀಸ್ ವಶಕ್ಕೆ..!