ಬೆಂಗಳೂರು : ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಇಬ್ಬರೂ ಒಂದೇ ಫೈಟ್ನಲ್ಲಿ ಪ್ರಯಾಣಿಸಿದ್ದಾರೆ. ಸೋಮಶೇಖರ್ ಪದೇ-ಪದೇ ಡಿಕೆಶಿ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಎಸ್ಟಿಎಸ್ ಕಾಂಗ್ರೆಸ್ ಕಡೆ ಮುಖ ಮಾಡೋದು ಪಕ್ಕಾನಾ..? ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ.
ಎಸ್.ಟಿ.ಸೋಮಶೇಖರ್ ಒಂದೇ ವಿಮಾನದಲ್ಲಿ ಡಿಕೆಶಿ ಜೊತೆ ಮಂಗಳೂರಿಗೆ ಹೋಗಿದ್ದರು. ಇಬ್ಬರು ನಾಯಕರು ಕರ್ಣಾಟಕ ಬ್ಯಾಂಕ್ನ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಸೋಮಶೇಖರ್ ಹಲವು ಕಾರ್ಯಕ್ರಮಗಳಲ್ಲಿ ಡಿಕೆಶಿ ಜೊತೆ ಕಾಣಿಸಿಕೊಂಡಿದ್ದಾರೆ.
ಬಿಜೆಪಿಯಲ್ಲಿ ಇದ್ದರೂ ಕಾಂಗ್ರೆಸ್ ಕಡೆ ಮುಖ ಮಾಡಿರುವ ಎಸ್ಟಿ ಸೋಮಶೇಖರ್ ಅವರು ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್ ಜೊತೆ ಮಾತನಾಡಿದ್ದಾರೆ. ನಿನ್ನೆ ಆರ್.ಆರ್.ನಗರದ ಕಾರ್ಯಕ್ರಮದಲ್ಲೂ ಸೋಮಶೇಖರ್ ಡಿಕೆಶಿಯನ್ನು ಹೊಗಳಿದ್ದಾರೆ. ಹಾಗೆಯೇ, ಸಿಎಂ ಸಿದ್ದರಾಮಯ್ಯನವರು ಮಂಡಿಸಿದ 15ನೇ ರಾಜ್ಯ ಬಜೆಟ್ ಅನ್ನು ಎಸ್.ಟಿ ಸೋಮಶೇಖರ್ ಹಾಡಿ ಹೊಗಳಿದ್ದರು.
ಇದನ್ನೂ ಓದಿ : ಪರೀಕ್ಷೆ ವೇಳೆ ನಿದ್ರೆ ಕಂಟ್ರೋಲ್ಗೆ ಉಗ್ರರು ನುಂಗುವ ಮಾತ್ರೆ ಸೇವಿಸುತ್ತಿರುವ ವಿದ್ಯಾರ್ಥಿಗಳು..!