ಬಾಗಲಕೋಟೆ : ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಧನ್ನೂರು ಗ್ರಾಮದಲ್ಲಿ ಗ್ರಾಪಂ ಸದಸ್ಯನ ಮೇಲೆ ಅಧ್ಯಕ್ಷೆ ಪುತ್ರ ದರ್ಪ ಮೆರೆದಿರೋ ಆರೋಪ ಕೇಳಿ ಬಂದಿದೆ. ಕಟ್ಟಿಗೆ ದೊಣ್ಣೆಗಳಿಂದ ಗ್ರಾಪಂ ಸದಸ್ಯ ಹಾಗೂ ಕುಟುಂಬದವರ ಮೇಲೆ ಹಲ್ಲೆ ಮಾಡಿದ್ದು ಮೂವರಿಗೆ ಗಾಯಗಳಾಗಿವೆ.
ನಿನ್ನೆ ಹಮ್ಮಿಕೊಂಡಿದ್ದ ಸಂವಿಧಾನ ಜಾಥಾ ಕಾರ್ಯಕ್ರಮದಲ್ಲಿ ಶಿಷ್ಟಾಚಾರದ ಪ್ರಕಾರ ಕಾರ್ಯಕ್ರಮದ ವೇದಿಕೆ ಮೇಲೆ ಧನ್ನೂರು ಗ್ರಾಪಂ ಅಧ್ಯಕ್ಷೆ ಕಾಂಗ್ರೆಸ್ ಪಕ್ಷದ ಸಂಗಮ್ಮ ಶಿರಹಟ್ಟಿ ಹಾಗೂ ಬಿಜೆಪಿ ಪಕ್ಷದ ಸದಸ್ಯ ಸುರೇಶ್ ತಳವಾರ ಕೂತಿದ್ರು. ಕಾರ್ಯಕ್ರಮದ ವೇಳೆ ಸುರೇಶ್ ಬೆಂಬಲಿಗರು ಶಿಳ್ಳೆ, ಕೇಕೆ ಹಾಕಿದ್ದರು.
ಸುರೇಶ್ ಬೆಂಬಲಿಗರ ವರ್ತನೆಯಿಂದ ಕೋಪಗೊಂಡಿದ್ದ ಅಧ್ಯಕ್ಷೆ ಸಂಗಮ್ಮನ ಮಗ ಆನಂದ ಗರಂ ಆಗಿ ವಾಗ್ವಾದಕ್ಕೆ ಇಳಿದಿದ್ದು, ತಡೆಯಲು ಬಂದ ಸುರೇಶ್ಗೆ ಕಟ್ಟಿಗೆಯಿಂದ ಹಲ್ಲೆ ಮಾಡಿದ್ದಾರೆ. ಸದಸ್ಯ ಸುರೇಶ್ ತಳವಾರ, ಸುನಂದಾ ತಳವಾರ, ಸಂಜೀವ್ ತಳವಾರ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.
ಹುನಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹುನಗುಂದ ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ಆಸ್ಪತ್ರೆಗೆ ಭೇಟಿಕೊಟ್ಟು ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ.
ಇದನ್ನೂ ಓದಿ : ವಾಹನ ಸವಾರರಿಗೆ ಗುಡ್ ನ್ಯೂಸ್ : HSRP ನಂಬರ್ ಪ್ಲೇಟ್ ಅಳವಡಿಸಲು ಮೇ.31ರವರೆಗೆ ಅವಧಿ ವಿಸ್ತರಣೆ..!