ಮಡಿಕೇರಿ : ಬೈಕ್ ಸರ್ವಿಸ್ಗೆ ಬಂದಿದ್ದ ಗ್ರಾಹಕ ಮತ್ತು ಶೋರೂಂ ಮಾಲೀಕನ ನಡುವಿನ ಜಗಳ ಕೊಲೆಯಲ್ಲಿ ಕೊನೆಗೊಂಡಿದೆ. ಕೊಡಗಿನ ಕುಶಾಲನಗರದಲ್ಲಿರುವ ಕೊಡಗನ ಮೋಟರ್ಸ್ ಮಾಲೀಕ ಶ್ರೀನಿಧಿ ಹಾಗೂ ಮಡಿಕೇರಿ ನಿವಾಸಿ ಸಾಜಿದ್(23) ಎಂಬಾತನ ನಡುವೆ ಗಲಾಟೆ ನಡೆದಿತ್ತು.
ಗಲಾಟೆ ವಿಕೋಪಕ್ಕೆ ತಿರುಗಿ ಶ್ರೀನಿಧಿ ಸಾಜಿದ್ ಎದೆಗೆ ಚೂಪಾದ ಆಯುಧದಿಂದ ಇರಿದಿದ್ದ. ಗಂಭೀರ ಗಾಯಗೊಂಡ ಸಜೀದ್ ನನ್ನು ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ರವಾನಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾಜಿದ್ ಮೃತಪಟ್ಟಿದ್ದಾನೆ. ಘಟನೆ ಬಗ್ಗೆ ಎಸ್ ಡಿ.ಪಿ ಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಪ್ರತಿಕ್ರಿಯಿಸಿದ್ದು, ಮೃತರ ಕುಟುಂಬಕ್ಕೆ ಐವತ್ತು ಲಕ್ಷ ರೂ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ರು.
ಇದನ್ನೂ ಓದಿ : ಕಲಬುರಗಿ : 20 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಲೋಕಾ ಬಲೆಗೆ ಬಿದ್ದ ಗ್ರಾಮ ಪಂಚಾಯಿತಿ ಕಾರ್ಯದರ್ಶಿ..!
Post Views: 61