ಬೆಂಗಳೂರಿಗೆ ಗಾಂಜಾ ತರ್ತಿದ್ದ ಪೆಡ್ಲರ್ಸ್ ಆಂಧ್ರದಲ್ಲಿ ಅರೆಸ್ಟ್ ಆಗಿದ್ದಾರೆ. ಮಾಜಿ ಕಾರ್ಪೊರೇಟರ್ ಪುತ್ರ ಸೇರಿ ಮೂವರು ಲಾಕ್ ಆಗಿದ್ದು, 44 ಲಕ್ಷ ಮೌಲ್ಯದ ಗಾಂಜಾ ತರುತ್ತಿದ್ದ ವೇಳೆ ಗುಂಟೂರಿನಲ್ಲಿ ಆಂಧ್ರ ಪ್ರದೇಶ ಪೊಲೀಸರಿಂದ ಮೂವರನ್ನು ಬಂಧಿಸಲಾಗಿದೆ.
ಬಂಧಿತ 3 ಜನ ಆರೋಪಿಗಳಿಂದ 60 ಕೆಜಿ ಗಾಂಜಾ, 7 ಮೊಬೈಲ್, 2 ಕಾರು, 2.28 ಲಕ್ಷ ನಗದು ಜಪ್ತಿ ಮಾಡಲಾಗಿದ್ದು,
ಪೊಲೀಸರು ಮಾಲು ಸಹಿತ ಮೂವರನ್ನು ಅರೆಸ್ಟ್ ಮಾಡಿದ್ದಾರೆ. HSR ಲೇಔಟ್ ವಾಸಿ 34 ವರ್ಷದ ಕಿಶೋರ್ ಪ್ರಕಾಶ್ ರೆಡ್ಡಿ, ಸುದ್ದಗುಂಟೆಪಾಳ್ಯ ಮಾಜಿ ಕಾರ್ಪೊರೇಟರ್ ಮಗ ಅಭಿನವ್, ಬಾಲಾಜಿ ನಗರ ವಾಸಿ ಸುಮಂತ್ ಕುಮಾರ್ ಬಂಧಿತ ಆರೋಪಿಗಳಾಗಿದ್ದಾರೆ.
ಪೊತ್ತೂರಿನ ಚೆಕ್ಪೋಸ್ಟ್ನಲ್ಲಿ ತಪಾಸಣೆ ಮಾಡುವಾಗ ಗಾಂಜಾ ಪತ್ತೆಯಾಗಿದ್ದು, ಪೊಲೀಸರು ಎರಡು ಕಾರುಗಳಲ್ಲೂ ಗಾಂಜಾ ಪತ್ತೆ ಮಾಡಿದ್ದಾರೆ. ಒಡಿಶಾದ ಕೋರಾಪುಟ್ ಜಿಲ್ಲೆ ಅರಗೊಂಡದಲ್ಲಿ ಗಾಂಜಾ ಖರೀದಿ ಮಾಡಿ ತರುತ್ತಿದ್ದ ವೇಳೆ
ಚೆಕ್ಪೋಸ್ಟ್ ನಲ್ಲಿ ಸಿಕ್ಕಿಬಿದ್ದಿದ್ದಾರೆ. ತನಿಖೆ ವೇಳೆ ಗಾಂಜಾ ಖರೀದಿ ಮತ್ತು ಮಾರಾಟದ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ : ಹ್ಯಾಟ್ರಿಕ್ ಹೀರೋ ಶಿವಣ್ಣನಿಗೆ ‘ಸಪ್ತ ಸಾಗರದಾಚೆ ಎಲ್ಲೋ’ ನಿರ್ದೇಶಕ ಹೇಮಂತ್ ರಾವ್ ಆಕ್ಷನ್ ಕಟ್..!