ದೆಹಲಿ : ಲೋಕಸಭಾ ಚುನಾವಣೆಗೆ ತಯಾರಿಗಳು ನಡೆಯುತ್ತಿದೆ. ಈ ಹಿನ್ನೆಲೆಯಿಂದಾಗಿ ಬಿಜೆಪಿ ಹೈಕಮಾಂಡ್ ಇದೀಗ ರಾಜ್ಯದ 28 ಕ್ಷೇತ್ರಗಳಿಗೆ ಉಸ್ತುವಾರಿಗಳನ್ನು ನೇಮಕ ಮಾಡಿದೆ.
ಕರ್ನಾಟಕಕ್ಕೆ ಡಾ. ರಾಧಾ ಮೋಹನ್ ದಾಸ್ ಅಗರ್ವಾಲ್ ಮತ್ತು ಸಹ ಉಸ್ತುವಾರಿಯಾಗಿ ಸುಧಾಕರ್ ರೆಡ್ಡಿ ಅವರನ್ನ ನೇಮಕ ಮಾಡಿದೆ. ವಿವಿಧ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಚುನಾವಣಾ ಉಸ್ತುವಾರಿಗಳನ್ನು ಜೆ.ಪಿ.ನಡ್ಡಾ ಅವರು ನೇಮಿಸಿ, ಆದೇಶ ಹೊರಡಿಸಿದ್ದಾರೆ. ಇದೀಗ ಜಿಲ್ಲಾವಾರು ಬಿಜೆಪಿ ಉಸ್ತುವಾರಿಗಳ ಪಟ್ಟಿ ಬಿಡುಗಡೆಯಾಗಿದೆ.
ಜಿಲ್ಲಾವಾರು ಬಿಜೆಪಿ ಉಸ್ತುವಾರಿಗಳ ಪಟ್ಟಿ :
- ಮೈಸೂರು – ಡಾ.ಸಿ.ಎನ್ ಅಶ್ವಥ್ ನಾರಾಯಣ್
- ಚಾಮರಾಜನಗರ – ಎನ್.ವಿ ಪಣೀಶ್
- ಮಂಡ್ಯ – ಸುನೀಲ್
- ಹಾಸನ – ಎಂ.ಕೆ ಪ್ರಾಣೇಶ್
- ದಕ್ಷಿಣ ಕನ್ನಡ – ಕೋಟ ಶ್ರೀನಿವಾಸ ಪೂಜಾರಿ
- ಉಡುಪಿ ಮತ್ತು ಚಿಕ್ಕಮಗಳೂರಿಗೆ – ಅರಗ ಜ್ಞಾನೇಂದ್ರ
- ಶಿವಮೊಗ್ಗ – ರಘುಪತಿ ಭಟ್
- ಉತ್ತರ ಕನ್ನಡ – ಹರತಾಳು ಹಾಲಪ್ಪ
- ಧಾರವಾಡ – ವೀರಣ್ಣ ಕದಡಿ
- ಹಾವೇರಿ – ಅರವಿಂದ್ ಬೆಲ್ಲದ್
- ಬೆಳಗಾವಿ – ವೀರಣ್ಣ ಚರಂತಿಮಠ
- ಚಿಕ್ಕೋಡಿ – ಅಭಯ್ ಪಾಟೀಲ್
- ಬಾಗಲಕೋಟೆ- ಲಿಂಗಾರಾಜ ಪಾಟೀಲ್
- ವಿಜಯಪುರ – ರಾಜಶೇಖರ್ ಶಿಲವಂತ
- ಬೀದರ್-ಅಮರನಾಥ್ ಪಾಟೀಲ್
- ಕಲಬುರಗಿ – ರಾಜುಗೌಡ
- ರಾಯಚೂರು – ದೊಡ್ಡನಗೌಡ ಹೆಚ್ ಪಾಟೀಲ್
- ಕೊಪ್ಪಳ – ರಘುನಾಥ್ ರಾವ್
- ಬಳ್ಳಾರಿ – ಎನ್.ರವಿಕುಮಾರ್
- ದಾವಣಗೆರೆ – ಭೈರತಿ ಬಸವರಾಜ್
- ಚಿತ್ರದುರ್ಗ – ಚನ್ನಬಸಪ್ಪ
- ತುಮಕೂರು – ಗೋಪಾಲಯ್ಯ
- ಚಿಕ್ಕಬಳ್ಳಾಪುರ -ಕಟ್ಟಾ ಸುಬ್ರಮಣ್ಯ ನಾಯ್ಡು
- ಕೋಲಾರ- ಸುರೇಶ್ ಗೌಡ
- ಬೆಂಗಳೂರು ಗ್ರಾಮೀಣ – ನಿರ್ಮಲ್ ಕುಮಾರ್ ಸುರಾನ
- ಬೆಂಗಳೂರು ದಕ್ಷಿಣ – ಎಂ.ಕೃಷ್ಣಪ್ಪ
- ಬೆಂಗಳೂರು ಕೇಂದ್ರ- ಗುರುರಾಜ್ ಗಂಟಿಹೊಳೆ
- ಬೆಂಗಳೂರು ಉತ್ತರ – ಎಸ್.ಆರ್ ವಿಶ್ವನಾಥ್
ಇದನ್ನೂ ಓದಿ : ರಾಜ್ಯದ ಬಿಜೆಪಿ ಚುನಾವಣಾ ಉಸ್ತುವಾರಿಗಳಾಗಿ ಇಬ್ಬರು ನೇಮಕ..!
Post Views: 74