ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಆರಂಭದಿಂದಲೇ ಸಾಕಷ್ಟು ವಿವಾದಗಳು ಸೃಷ್ಟಿ ಆದವು. ಇದರ ನಡುವೆ ಹಂಸಗೆ ಕೆಟ್ಟ ಪದ ಬಳಸಿ ಮಾತಾಡಿದ್ದಕ್ಕೆ ಜಗದೀಶ್ ಅವರ ಮೇಲೆ ಮಹಿಳಾ ಸ್ಪರ್ಧಿಗಳೆಲ್ಲಾ ರೊಚ್ಚಿಗೆದ್ದು ಜಗದೀಶ್ ಅವರನ್ನು ಬಾಯಿಗೆ ಬಂದಂತೆ ಬೈದ್ರು, ಬಳಿಕ ರಂಜಿತ್, ಜಗದೀಶ್ ಅವರನ್ನು ತಳ್ಳಿ ತಪ್ಪು ಮಾಡಿದ್ರು. ಬಳಿಕ ಇಬ್ಬರನ್ನು ದೊಡ್ಮನೆಯಿಂದ ಹೊರಹಾಕಲಾಯ್ತು.
ಇವೆಲ್ಲಾ ವಿಚಾರಗಳ ಬಗ್ಗೆ ಪ್ರೇಕ್ಷಕರ ವಲಯದಲ್ಲೂ ಚರ್ಚೆ ನಡೆದಿತ್ತು. ಯಾವುದು ತಪ್ಪು? ಯಾವುದು ಸರಿ ಎನ್ನುವುದನ್ನು ತಿಳಿಯಲು ಪ್ರೇಕ್ಷಕರು ವಾರದ ಕಿಚ್ಚನ ಪಂಚಾಯಿತಿ ನೋಡಲು ಕಾಯ್ತಿದರು. ಕಿಚ್ಚ ಸುದೀಪ್ ಅವರು ತನ್ನ ಪಂಚಾಯಿತಿಯಲ್ಲಿ ಸ್ಪರ್ಧಿಗಳನ್ನೆಲ್ಲಾ ತರಾಟೆಗೆ ತೆಗೆದುಕೊಂಡಿದ್ದಾರೆ. ಜಗದೀಶ್ ಅವರು ಹೋಗಿದ್ದಕ್ಕೆ ಯಾರಿಗೆ ಖುಷಿ ಇದೆ ಎಂದು ಕೇಳಿದಾಗ ಹಂಸ, ಸುರೇಶ್ ಹಾಗೂ ತ್ರಿವಿಕ್ರಮ್ ಅವರು ಕೈ ಎತ್ತಿದ್ರು. ಹೆಣ್ಣು ಮಕ್ಕಳಿಗೆ ಬಳಸೋ ಪದ ಇರಿಸು ಮುರಿಸು ಉಂಟು ಮಾಡಿತ್ತು ಎಂಡಿದ್ದಾರೆ.
ಇನ್ನು ಜಗದೀಶ್ ಮನೆಯಿಂದ ಹೊರ ಹೋಗಲು ರೂಲ್ಸ್ ಬ್ರೇಕ್ ಮಾಡಿದ್ದು ಕಾರಣ ಅಲ್ಲ ಎಂದು ಕಿಚ್ಚ ಸುದೀಪ್ ಹೇಳಿದ್ರು. ಜಗದೀಶ್ ಶೋ ಬಗ್ಗೆ ಕೆಟ್ಟದಾಗಿ ಮಾತಾಡಿದ್ರು. ಸ್ಪರ್ಧಿಗಳ ಬಗ್ಗೆ ಕೂಡ ಅಸಭ್ಯವಾಗಿ ಮಾತಾಡಿದ್ರು. ಅವರು ನಡೆದುಕೊಂಡ ರೀತಿಯನ್ನು ಕೂಡ ಬಿಗ್ ಬಾಸ್ ಗಮನಿಸಿದ್ದಾರೆ. ಅವರು ಬಳಸಿದ ಪದ, ಶೋ ಮರ್ಯಾದೆ ಹಾಗೂ ನಿಮ್ಮ ಸೆಕ್ಯೂರಿಟಿ ಎಲ್ಲ ಗಮನಿಸಿಯೇ ಜಗದೀಶ್ ಅವರನ್ನು ಹೊರಗೆ ಕಳಿಸಿದ್ದು ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
ಇದನ್ನೂ ಓದಿ : ಮೈಸೂರಿನಲ್ಲಿ ಮುಂದುವರೆದ ED ಶೋಧ – ಮೂರನೇ ದಿನವೂ ದಾಖಲೆಗಳನ್ನು ಜಾಲಾಡುತ್ತಿರುವ ಅಧಿಕಾರಿಗಳು..!