ಮಂಡ್ಯ : ನಾಪತ್ತೆಯಾಗಿದ್ದ ಶಿಕ್ಷಕಿ ಶವವಾಗಿ ಪತ್ತೆಯಾದ ಘಟನೆ ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ ನಡೆದಿದೆ. 28 ವರ್ಷದ ದೀಪಿಕಾ ಎಂಬಾಕೆ ಕೊಲೆಯಾದ ದುರ್ದೈವಿಯಾಗಿದ್ದಾರೆ. ಕೊಲೆಗೈದು ದುಷ್ಕರ್ಮಿಗಳು ಮಣ್ಣಿನಲ್ಲಿ ಹೂತು ಹಾಕಿದ್ದಾರೆ.
ಕೊಲೆಯಾದ ಮಹಿಳೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಮಾಣಿಕ್ಯಹಳ್ಳಿ ಗ್ರಾಮದ ನಿವಾಸಿಯಾಗಿದ್ದಾರೆ. ದೀಪಿಕಾ ಮೇಲುಕೋಟೆಯ SET ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಶಾಲೆಗೆ ಹೋಗಿ ಆನಂತರ ದೀಪಿಕಾ ನಾಪತ್ತೆಯಾಗಿದ್ದರು. ಜನವರಿ 20ರ ಮಧ್ಯಾಹ್ನದಿಂದ ದೀಪಿಕಾ ನಾಪತ್ತೆಯಾಗಿದ್ದರು.
ನಾಪತ್ತೆಯಾದ ಬಗ್ಗೆ ಕುಟುಂಬಸ್ಥರು ಜ.20ರ ಸಂಜೆ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ನಿನ್ನೆ ಸಂಜೆ ಮೇಲೆಕೋಟೆ ಬೆಟ್ಟದ ತಪ್ಪಲಿನಲ್ಲಿ ದೀಪಿಕಾ ಶವ ಪತ್ತೆಯಾಗಿದೆ. ಇದೀಗ ಮಹಿಳೆ ಕೊಲೆ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಸ್ಥಳಕ್ಕೆ ಮಂಡ್ಯ ಎಸ್ಪಿ ಎನ್.ಯತೀಶ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಶಿಕ್ಷಕಿ ದೀಪಿಕಾ ಇನ್ಸಾಟಾಗ್ರಾಂ ನಲ್ಲಿ ಸಾಕಷ್ಟು ಆಕ್ಟೀವ್ ಆಗಿದ್ದರು.
ಭಯಾನಕವಾಗಿದೆ ಮಂಡ್ಯ ಟೀಚರ್ ಮರ್ಡರ್ :
8 ವರ್ಷದ ಹಿಂದೆ ದೀಪಿಕಾ ಒಂದೇ ಊರಿನ ಲೋಕೇಶ್ ಜೊತೆ ಅರೇಂಜ್ ಮ್ಯಾರೇಜ್ ಆಗಿದ್ದರು. ದೀಪಿಕಾ ದಂಪತಿಗೆ 6 ವರ್ಷದ ಮಗು ಸಹ ಇದೆ. ದೀಪಿಕಾ ಶನಿವಾರ ಮಧ್ಯಾಹ್ನ ಕ್ಲಾಸ್ ಮುಗಿಸಿ ಬರ್ತಿದ್ದರು. ಪಾಂಡವಪುರದಲ್ಲಿದ್ದಾಗ ಸ್ಥಳೀಯರು ತಂದೆ ವೆಂಕಟೇಶ್ಗೆ ಫೋನ್ ಮಾಡಿದ್ರು, ನಿಮ್ಮ ಸ್ಕೂಟರ್ ವರನಂದಮ್ಮ ದೇಗುಲ ಬಳಿ ನಿಂತಿದ ಅಂತಾ ಹೇಳಿದ್ದಾರೆ.
ಸ್ಥಳಕ್ಕೆ ತಂದೆ ಸ್ನೇಹಿತರ ಜತೆ ಹೋಗಿ ಮಗಳ ಹುಡುಕಿದ್ದು, ಎಷ್ಟೇ ಹುಡುಕಿದ್ರೂ ಮಗಳು ಸಿಗದಿದ್ದಾಗ ಪೊಲೀಸರಿಗೆ ದೂರು ನೀಡಿದ್ದಾರೆ. ಪೋಷಕರು ಸ್ಕೂಟರ್ ಸಿಕ್ಕ ಸ್ಥಳದ ಸುತ್ತಮುತ್ತ ಹುಡುಕಿದ್ದಾರೆ.
ನೊಣಗಳು ತುಂಬಿಕೊಂಡಿದ್ದ ಜಾಗದಲ್ಲಿ ವಾಸನೆ ಬಂದಿತ್ತು, ವಾಸನೆ ಬಂದ ಜಾಗದಲ್ಲಿ ಮಣ್ಣಿನ ರಾಶಿ ಪತ್ತೆಯಾಗಿತ್ತು. ಬಗೆದು ನೋಡಿದಾಗ ದೀಪಿಕಾ ಶವ ಪತ್ತೆಯಾಗಿದೆ. ಕೂಡಲೇ ಪೊಲೀಸರು ಸ್ಥಳಕ್ಕೆ ಬಂದು ಶವ ವಶಕ್ಕೆ ಪಡೆದಿದ್ದಾರೆ, ಮೇಲುಕೋಟೆ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಪೊಲೀಸರು ದೀಪಿಕಾ ಫೋನ್ ಕಾಲ್ ಡಿಟೇಲ್ಸ್ ಪತ್ತೆ ಮಾಡುತ್ತಿದ್ದು, ಲಾಸ್ಟ್ ಕಾಲ್ ಮಾಡಿದ್ದವರ ಸಂಪರ್ಕಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : PSI ನೇಮಕಾತಿ ಮರುಪರೀಕ್ಷೆ : ಈ ಬಾರಿ ಸ್ಟ್ರಿಕ್ಟ್ ರೂಲ್ಸ್ ಜಾರಿ ಮಾಡಿದ KEA..!