ಶ್ರೀನಗರ : ಭಾರತದ ಕಿರೀಟ ಅಂತಾ ಕರೆಸಿಕೊಳ್ಳುವ ಜಮ್ಮು ಮತ್ತು ಕಾಶ್ಮೀರದಲ್ಲಿ ಹೊಸ ಭರವಸೆ ಈಗ ಮೂಡಿದೆ. ಸದಾ ಉಗ್ರರ ಅಟ್ಟಹಾಸ ಹಾಗೂ ದಾಳಿಯಿಂದ ಬಳಲಿ ಹೋಗಿದ್ದ ಜಮ್ಮು & ಕಾಶ್ಮೀರ ಕಳೆದ ಕೆಲವು ವರ್ಷಗಳಿಂದ ಶಾಂತವಾಗಿ ಬದುಕುತ್ತಿದೆ. ಹೀಗಿದ್ದಾಗ ಕೇಂದ್ರ ಸರ್ಕಾರ ಕೂಡ ಶಿಸ್ತು ಬದ್ಧವಾಗಿ ಕಣಿವೆ ರಾಜ್ಯ ಜಮ್ಮು & ಕಾಶ್ಮೀರದ ವಿಧಾನಸಭೆಗೆ ಚುನಾವಣೆ ನಡೆಸಲು ಈಗ ಸಕಲ ಸಿದ್ಧತೆ ಕೈಗೊಂಡಿದೆ.
10 ವರ್ಷಗಳ ನಂತರ ಕಣಿವೆ ರಾಜ್ಯ ಜಮ್ಮು-ಕಾಶ್ಮೀರಕ್ಕೆ ವಿಧಾನಸಭೆ ಎಲೆಕ್ಷನ್ ನಡೀತಿದ್ದು, ಇಂದು 24 ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ನಡೆಯಲಿದೆ. ಶಸ್ತ್ರ ಸಜ್ಜಿತ ಭದ್ರತಾ ಪಡೆಗಳ ಬಂದೋಬಸ್ತ್ನಲ್ಲಿ ಮತದಾನ ನಡೆಯುತ್ತಿದ್ದು, 10 ವರ್ಷಗಳ ನಂತರ ಬಂದ ಮತದಾನ ಅವಕಾಶ ಬಳಸಿಕೊಳ್ಳಲು ಜನರು ಉತ್ಸಾಹದಿಂದ ಮತಗಟ್ಟೆಯ ಕಡೆಗೆ ಬರ್ತಿದ್ದಾರೆ.
ದಕ್ಷಿಣ ಕಾಶ್ಮೀರ ಭಾಗದ 16 ಕ್ಷೇತ್ರಗಳು ಸೇರಿದಂತೆ 24 ಕ್ಷೇತ್ರಗಳಿಗೆ ಪೊಲೀಸ್ ಭದ್ರಕೋಟೆ ನಿರ್ಮಿಸಲಾಗಿದೆ. 90 ಕ್ಷೇತ್ರಗಳ ಪೈಕಿ 24 ವಿಧಾನಸಭೆ ಕ್ಷೇತ್ರಗಳಿಗೆ 23 ಲಕ್ಷ ಮತದಾರರು ಮತದಾನ ಮಾಡುತ್ತಿದ್ದಾರೆ. 219 ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಇದನ್ನೂ ಓದಿ : ಕಿಲ್ಲರ್ BMTCಗೆ ಮತ್ತೊಂದು ಬಲಿ – ತಡರಾತ್ರಿ ಮೆಜೆಸ್ಟಿಕ್ನಲ್ಲಿ ಬಸ್ ಹರಿದು ವಿಶೇಷ ಚೇತನ ಯುವಕ ಸಾವು..!