ಬೆಂಗಳೂರು : ಆಧಾರ್ ಕಾರ್ಡ್ ಮತ್ತು ಫಿಂಗರ್ ಪ್ರಿಂಟ್ ಬಳಸಿ ಬ್ಯಾಂಕ್ನಲ್ಲಿದ್ದ ಹಣ ವಂಚಿಸಿದ್ದಾರೆ. AEPS (adhar enable payment system) ಬಳಸಿ ವಂಚನೆ ಮಾಡಲಾಗ್ತಿತ್ತು. ನಗರದಲ್ಲಿ ಈ ರೀತಿ ಒಟ್ಟು 120ಕ್ಕು ಹೆಚ್ಚು ಕೇಸ್ ದಾಖಲಾಗಿತ್ತು.
ಎಸ್ಐಟಿ ರಚನೆ ಮಾಡಿ ಪ್ರಕರಣದ ತನಿಖೆ ನಡೆಸುವಂತೆ ಕಮಿಷನರ್ ಸೂಚಿಸಿದ್ದರು. ನಾರ್ತ್ ಈಸ್ಟ್ ಡಿಸಿಪಿ ಲಕ್ಷ್ಮೀ ಪ್ರಸಾದ್ ನೇತ್ರತ್ವದಲ್ಲಿ ತನಿಖೆ ನಡೆದಿತ್ತು. ಈ ವೇಳೆ ಬಿಹಾರ ಮೂಲದ ರುಹಮಾನ್, ಅಬುಜರ್, ಆರೀಫ್, ನಾಶೀರ್ ಅಹಮದ್ ಅರೆಸ್ಟ್ ಆಗಿದ್ದಾರೆ. ಬಂಧಿತ ಅರೋಪಿಗಳು ಕರ್ನಾಟಕ ಸರ್ಕಾರದ ಕಂದಾಯ ಇಲಾಖೆ ವೆಬ್ ಸೈಟ್ ನಿಂದ ಮಾಹಿತಿ ಪಡೆಯುತ್ತಿದ್ರು.
ಆಧಾರ್ ನಂಬರ್ ಮತ್ತು ಫಿಂಗರ್ ಪ್ರಿಂಟ್ನ್ನು ಸೇಲ್ ಡೀಡ್ ಸೇರಿ ಇತರ ದಾಖಲಾತಿಗಳ ಮೂಲಕ ಪಡೆದುಕೊಳ್ತಿದ್ರು. ಬಳಿಕ AEPS ವ್ಯವಸ್ಥೆ ಬಳಸಿ ಹಣ ವಿತ್ ಡ್ರಾ ಮಾಡ್ತಿದ್ರು. ಹೀಗೆಯೇ ಕರ್ನಾಟಕ, ಆಂದ್ರಪ್ರದೇಶ, ತೆಲಂಗಾಣ ಸೇರಿ ಹಲವಾರು ರಾಜ್ಯದ ಜನರಿಗೆ ವಂಚನೆ ಮಾಡಿದ್ದಾರೆ.
ಸದ್ಯ ಪೊಲೀಸರು ಕಂದಾಯ ಇಲಾಖೆಗೆ ಪತ್ರ ಬರೆದಿದ್ದು, ಸಾರ್ವಜನಿಕವಾಗಿ ಫಿಂಗರ್ ಪ್ರಿಂಟ್ ಮತ್ತು ಆಧಾರ್ ನಂಬರ್ ಸಿಗದಂತೆ ಮಾಡಲು ಸೂಚಿಸಲಾಗಿತ್ತು. ಈಗ ಕಂದಾಯ ಇಲಾಖೆ ಅಧಿಕಾರಿಗಳು ದಾಖಲಾತಿಗಳು ಸಿಗದಂತೆ ಮಾಡುತ್ತಿದ್ದಾರೆ.
ಸದ್ಯ ಈಶಾನ್ಯ ವಿಭಾಗದ ಡಿಸಿಪಿ ನೇತ್ರತ್ವದಲ್ಲಿ ತನಿಖೆ ಮುಂದುವರೆದಿದೆ. ಆರೋಪಿಗಳು ದಾಖಲಾತಿಗಳನ್ನು ವೆಬ್ ಸೈಟ್ ನಿಂದ ಪಡೆದು ಐದು ಸಾವಿರಕ್ಕೆ ಮಾರಾಟ ಮಾಡಿರುವುದು ಸಹ ತನಿಖೆ ವೇಳೆ ಪತ್ತೆಯಾಗಿದೆ.
ಇದನ್ನೂ ಓದಿ : ಮೆಜೆಸ್ಟಿಕ್ನಲ್ಲಿ KSRTC ಬಸ್ ಮೇಲೆ ಪುಂಡರ ದಾಳಿ : 2 KSRTC ಬಸ್ಗಳ ಗ್ಲಾಸ್ ಪುಡಿಪುಡಿ..!