ಬೆಂಗಳೂರು : ಒಂದಲ್ಲಾ ಒಂದು ದಿನ ಸಿಎಂ ಕುರ್ಚಿಗೆ ನಾನು ಹೋಗ್ತೀನಿ, ಸ್ವಾಭಾವಿಕವಾಗಿ ಸಿಎಂ ಸೀನಿಯಾರಿಟಿಯಲ್ಲಿ ನಾನಿದ್ದೇನೆ ಎಂದು ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಸಿಎಂ ಆಗೋ ಆಸೆ ಹೊರಹಾಕಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಎಂ.ಬಿ ಪಾಟೀಲ್ ಮಾತನಾಡಿ, ಸದ್ಯ ಸಿಎಂ ಕುರ್ಚಿ ಖಾಲಿ ಇಲ್ಲ. ಸಿದ್ದರಾಮಯ್ಯ ಮುಂದುವರಿತಾರೆ, ಕಾಂಗ್ರೆಸ್ನಲ್ಲಿ ಯಾರಿಗೂ ಗಡಿಬಿಡಿ ಇಲ್ಲವೇ ಇಲ್ಲ. ಸಿಎಂ ಆಗೋ ರೇಸ್ನಲ್ಲಿ ಯಾರೂ ಇಲ್ಲ, ಚಿಕ್ಕವಯಸ್ಸಿನಲ್ಲೇ ಸಾಕಷ್ಟು ಮಂದಿ ಸಿಎಂ ಆಗಿದ್ದಾರೆ. ಅರಸು, ಗುಂಡೂರಾವ್, ಹೆಚ್ಡಿಕೆ ಸಿಎಂ ಆಗಲಿಲ್ಲವೇ..? ಶಿವಾನಂದ ಪಾಟೀಲರಿಗಿಂತಲೂ ನಾನು ಎರಡು ವರ್ಷ ಸೀನಿಯರ್ ಎಂದಿದ್ದಾರೆ.
ಪಾಟೀಲ್ ಪಾಳಿ ಬಹಳ ದೂರ ಇದೆ, ಅವ್ರು ಜನತಾದಳದಿಂದ ಬಂದವರು. ವಿಜಯಪುರ ಜಿಲ್ಲೆಯಿಂದ ನಾನ್ ಸಿಎಂ ಸ್ಥಾನಕ್ಕೆ ಬರ್ತೀನಿ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಇದನ್ನೂ ಓದಿ : ಕೈಮುಗಿದು ಕೇಳ್ಕೋತೀನಿ ಮಹದಾಯಿಗೆ ಅನುಮತಿ ಕೊಡಿಸಿ – ಪ್ರಹ್ಲಾದ್ ಜೋಶಿಗೆ ಡಿಸಿಎಂ ಡಿಕೆಶಿ ಮನವಿ..!
Post Views: 46