ಉಡುಪಿ : ನಾಡಿನೆಲ್ಲೆಡೆ ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ. ವಿಘ್ನ ವಿನಾಶಕನಿಗೆ ಭಕ್ತ ಸಮೂಹ ಮೊರೆ ಹೋಗಿದೆ. ಒಂದೆಡೆ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಮತ್ತೊಂದು ಕಡೆ ದೇಗುಲಗಳಲ್ಲಿ ವಿಶೇಷ ಪೂಜೆ ಪುನಸ್ಕಾರ ಜೋರಾಗಿದೆ. ಸಂಕಷ್ಟ ನಿವಾರಿಸು ಗಣಪ ಎಂದು ಭಕ್ತರು ದೇಗುಲಗಳಿಗೆ ತೆರಳಿ ಪೂಜೆ ಸಲ್ಲಿಸುತ್ತಿದ್ದಾರೆ.
ಅದರಂತೆ ಉಡುಪಿ ಪ್ರಸಿದ್ದ ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ಭಕ್ತಸಾಗರ ಹರಿದು ಬಂದಿದೆ. ಕುಂದಾಪುರದ ಆನೆಗುಡ್ಡೆ ವಿನಾಯಕ ದೇವಾಲಯದಲ್ಲಿ ನಿರಂತರ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿದ್ದು, ಗಣಪನಿಗೆ ಸಾವಿರ ನಾರಿಕೇಳಾ ಯಾಗ ಸಮರ್ಪಿಸಲಾಗುತ್ತಿದೆ.
ಆನೆಗುಡ್ಡೆ ವಿನಾಯಕನಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿದ್ದು, ಇಡೀ ದೇಗುಲವನ್ನು ಸಿಂಗಾರಗೊಳಿಸಲಾಗಿದೆ. ಚೌತಿ ಸಂಭ್ರಮದ ಕಾಲದಲ್ಲಿ ಮೊದಲಿಗೆ ಆನೆಗುಡ್ಡೆ ಗಣೇಶನಿಗೆ ಕೈ ಮುಗಿದು ಇಷ್ಟಾರ್ಥ ಈಡೇರಿಸುವಂತೆ ಬೇಡಿಕೊಳ್ಳುವುದು ರೂಡಿಯಲ್ಲಿ ಬೆಳೆದಿದೆ. ಇಂದು ದಿನಪೂರ್ತಿ ಧಾರ್ಮಿಕ ಕಾರ್ಯಕ್ರಮಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ದೇವಸ್ಥಾನದಲ್ಲಿ ಆಯೋಜಿಸಲಾಗಿದೆ.
ಇದನ್ನೂ ಓದಿ : ಆನ್ಲೈನಲ್ಲಿ ಲಕ್ಷ-ಲಕ್ಷ ಹಣ ಕಳ್ಕೊಂಡು ಸಾಲ ತೀರಿಸಲು ಈ ಭೂಪ ಮಾಡಿದ್ದೇನು ಗೊತ್ತಾ?