ಹುಬ್ಬಳ್ಳಿ : ಆನ್ಲೈನಲ್ಲಿ ಲಕ್ಷ-ಲಕ್ಷ ಹಣ ಕಳೆದುಕೊಂಡಿದ್ದ ಹುಬ್ಬಳ್ಳಿಯ ವ್ಯಕ್ತಿಯೊಬ್ಬ ಸಾಲ ತೀರಿಸಲು ಬ್ಯಾಂಕ್ ದರೋಡೆ ಮಾಡಿದ್ದಾನೆ. ಗೋಪನಕೊಪ್ಪದ ಮಂಜುನಾಥ ಹಬೀಬ್ ದರೋಡೆ ಮಾಡಿದಾತ.
ಯೂಟ್ಯೂಬ್ ನೋಡಿ ಬ್ಯಾಂಕ್ ದರೋಡೆಗೆ ಪ್ಲ್ಯಾನ್ ಮಾಡಿದ್ದ. ಷೇರು ಮಾರುಕಟ್ಟೆಯಲ್ಲೂ ಹಣ ಹೂಡಿಕೆ ಮಾಡಿ ಲಾಸ್ ಆಗಿದ್ದ. ನಿತ್ಯ ಸಾಲಗಾರರ ಕಾಟ ತಾಳಲಾರದೇ ಹುಬ್ಬಳ್ಳಿಯ APMC ಬಳಿ ಇರೋ ಯೂನಿಯನ್ ಬ್ಯಾಂಕ್ ದರೋಡೆ ಮಾಡಲು ಪ್ಲ್ಯಾನ್ ಮಾಡಿದ್ದ.
ಸಂಜೆ ಸುಮಾರಿಗೆ ಬ್ಯಾಂಕ್ಗೆ ನುಗ್ಗಿ ಸಿಬ್ಬಂದಿಗಳಿಗೆ ಚಾಕು ತೋರಿಸಿ ದರೋಡೆಗೆ ಪ್ಲ್ಯಾನ್ ಮಾಡಿದ್ದ. ಕೂಡಲೇ ಅಲರ್ಟ್ ಆದ ಸಿಬ್ಬಂದಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಹುಬ್ಬಳ್ಳಿಯ ನವನಗರ ಪೊಲೀಸರು ಮಂಜುನಾಥ ಹಬೀಬ್ನನ್ನು ಅರೆಸ್ಟ್ ಮಾಡಿದ್ದಾರೆ.
ಇದನ್ನೂ ಓದಿ : ಬೆಂಗಳೂರಿನ ದೊಡ್ಡ ಗಣಪತಿ ದೇಗುಲದಲ್ಲಿ ವಿಘ್ನನಿವಾರಕನಿಗೆ ವಿಶೇಷ ಅಲಂಕಾರ..!
Post Views: 358