ಮೈಸೂರು : ಚಾಮುಂಡಿ ಪ್ರಾಧಿಕಾರ ವಿಚಾರದಲ್ಲಿ ಮತ್ತೆ ಜಟಾಪಟಿ ಮುಂದುವರಿದಿದೆ. ಸಿಎಂ ನೇತೃತ್ವದ ಪ್ರಾಧಿಕಾರ ಸಭೆಗೆ ಆಕ್ಷೇಪ ವ್ಯಕ್ತಪಡಿಸಿರುವ ಸಂಸದ ಯಧುವೀರ್, ರಾಜಮಾತೆ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ಇದೀಗ ಅರಮನೆ ಆಕ್ಷೇಪಕ್ಕೆ ಮೈಸೂರಿನಲ್ಲಿ ತಿರುಗೇಟು ನೀಡಿರುವ ಸಿಎಂ ಸಿದ್ದರಾಮಯ್ಯ ಅವರು, ಯಾವುದೇ ಕಾನೂನು ಮೀರಿ ನಾವು ಸಭೆ ಮಾಡುತ್ತಿಲ್ಲ. ಈ ಹಿಂದೆಯೂ ಚಾಮುಂಡಿ ಆಡಳಿತ ಮಂಡಳಿ ಇತ್ತು. ಸರ್ಕಾರವೇ ಮೆಂಬರ್ಗಳನ್ನು ನೇಮಕ ಮಾಡ್ತಿತ್ತು. ಕೋರ್ಟ್ ಆದೇಶದಂತೆಯೇ ಪ್ರಾಧಿಕಾರದ ಸಭೆ ಮಾಡುತ್ತಿದ್ದೇನೆ ಎಂದಿದ್ದಾರೆ.
ಸಂಸದರ ಆದೇಶದಂತೆ ನಾವು ನಡೆದುಕೊಳ್ಳೋಕಾಗುತ್ತಾ? ಅವರು ಹೇಳಿದ್ದನ್ನೆಲ್ಲಾ ಸರ್ಕಾರ ಕೇಳೋಕೆ ಆಗುತ್ತಾ? ಅರಮನೆಯವರು ಪಡೆದಿದ್ದ ಸ್ಟೇ ತೆರವಾಗಿದೆ. ಕೋರ್ಟ್ನಲ್ಲಿ ಹೇಳಿರುವಂತೆಯೇ ಮಾಡ್ತಿದ್ದೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ದರ್ಶನ್ಗೆ ಶಾಕ್.. ಕೋರ್ಟ್ಗೆ ಇಂದೇ ಚಾರ್ಜ್ಶೀಟ್ ಸಲ್ಲಿಕೆ?
Post Views: 51