ಬೆಂಗಳೂರು : ಕುಮಾರಸ್ವಾಮಿ ಫೈಲ್ ಇನ್ನೂ ರಾಜ್ಯಪಾಲರ ಮುಂದಿದೆ. ಹೆಚ್ಡಿಕೆ ವಿರುದ್ಧದ ಪ್ರಾಸಿಕ್ಯೂಷನ್ ಕೋರಿಕೆ ಇತ್ಯರ್ಥ ಆಗಿಲ್ಲ. ಈ ಪ್ರಕರಣದಲ್ಲಾದರೂ ಪ್ರಾಸಿಕ್ಯೂಷನ್ಗೆ ಅನುಮತಿ ಕೊಡಬಹುದಿತ್ತು. ಇನ್ನೂ ಯಾಕೆ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು, ರಾಜ್ಯಪಾಲರು ಯಾವುದೇ ಫೈಲ್ ನನ್ನ ಮುಂದಿಲ್ಲ ಎಂದಿದ್ದಾರೆ. ಬಾಕಿ ಉಳಿಸಿಕೊಂಡಿಲ್ಲ, ಎಲ್ಲವನ್ನೂ ವಾಪಸ್ ಕಳಿಸಿದ್ದೇನೆ ಎಂದಿದ್ದಾರೆ. ತಮ್ಮ ಬಳಿ ಇರುವ ಹೆಚ್ಡಿಕೆ ಫೈಲ್ ಕ್ಲಿಯರ್ ಮಾಡಬಹುದಿತ್ತು ಎಂದು ತಿಳಿಸಿದ್ದಾರೆ.
ಇನ್ನೂ ಸಿದ್ದರಾಮಯ್ಯ ಅವರ ವಿಚಾರದಲ್ಲಿ ಆತುರ ತೋರಿದ್ದರು. ವಿರೋಧ ಪಕ್ಷದವರ ಪ್ರಕರಣಗಳಲ್ಲಿ ಯಾಕೆ ಈ ಆತುರ ಇಲ್ಲ. ಕೋರ್ಟ್ನಲ್ಲಿ ಏನ್ ಆಗಲಿದೆ ಅನ್ನೋದನ್ನು ಕಾದು ನೋಡ್ತೇವೆ. ರಾಷ್ಟ್ರಪತಿಯವರನ್ನು ಭೇಟಿ ಮಾಡುವ ಬಗ್ಗೆ ಆನಂತರ ತೀರ್ಮಾನಿಸುತ್ತೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಇದನ್ನೂ ಓದಿ : ‘ಸಿಗ್ನಲ್ ಮ್ಯಾನ್ 1971ʼ ಚಿತ್ರದ ಹಾಡು ಲೋಕಾರ್ಪಣೆ ಮಾಡಿದ ಸಂಸದ ಯದುವೀರ್ ಒಡೆಯರ್..!