ವಿಜಯನಗರ : ಮದುವೆಯಾಗಲು ಯಾರು ಹೆಣ್ಣು ಕೊಡುತ್ತಿಲ್ಲವೆಂದು ಯುವಕನೊಬ್ಬ ಮನನೊಂದು ಆತ್ಮಹತ್ಯೆಗೆ ಮಾಡಿಕೊಂಡಿರುವ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಡೆಕೋಟೆ ಗ್ರಾಮದಲ್ಲಿ ನಡೆದಿದೆ.
ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಡೆಕೋಟೆಯ ಗ್ರಾಮದ ಬಿ ಮಧುಸೂದನ್ (26) ಸಾವನ್ನಪ್ಪಿರುವ ಯುವಕನಾಗಿದ್ದಾನೆ. ಹುಡುಗನ ತಂದೆಯ ವರ್ತನೆ ಸರಿ ಇಲ್ಲ. ಮಾನಸಿಕ ಅಸ್ವಸ್ಥ, ಎಂದು ಹೆಣ್ಣು ಕೊಡುವವರು ನಿರಾಕರಣೆ ಮಾಡಿರುವ ಹಿನ್ನೆಲೆಯಲ್ಲಿ ಹುಡುಗಿ ಕೊಡಲು ನಿರಾಕರಿಸಿದಕ್ಕೆ ಯುವಕ ಮನನೊಂದಿದ್ದ.
ಹೆಣ್ಣು ಸಿಗದಿದ್ದಕ್ಕೆ ಬಿ ಮಧುಸೂದನ್ ಕುಡಿತದ ಚಟಕ್ಕೆ ಕೂಡ ಬಿದ್ದಿದ್ದ ಎನ್ನಲಾಗುತ್ತಿದೆ. ನನಗೆ ಮದುವೆನೇ ಆಗಲ್ಲ ಎಂದು ಮಧುಸೂದ ಮನನೊಂದು ವಿಷಯ ಸೇವಿಸಿದ್ದ.
ಗ್ರಾಮದ ಹೊರವಲಯದ ವೇಣಿ ಈರಪ್ಪನ ಮಠದ ಬಳಿ ಜ.5 ರಂದು ಮಧುಸೂಧನ ವಿಷ ಸೇವಿದ್ದು, ಚಿಕಿತ್ಸೆ ಫಲಕಾರಿಯಾಗದೆ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಗುಡೆಕೋಟೆ ಪೊಲೀಸ್ ಠಾಣೆಯಲ್ಲಿ ಘಟನೆ ಕುರಿತಂತೆ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಮೈಸೂರಿನ ಅರುಣ್ ಯೋಗಿರಾಜ್ರನ್ನು ಹಾಡಿ ಹೊಗಳಿದ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಅಧ್ಯಕ್ಷ ಶ್ರೀ ಚಂಪತ್ ರೈ..