Download Our App

Follow us

Home » ರಾಜಕೀಯ » ಲೂಟಿಕೋರರಿಗೆ ನಾವು ದುಡ್ಡು ಕೊಡೋಕಾಗುತ್ತಾ? – ಆಪರೇಷನ್​​ ಕಮಲ ಆರೋಪಕ್ಕೆ ಶಾಸಕ ಅಶ್ವಥ್ ನಾರಾಯಣ ತಿರುಗೇಟು..!

ಲೂಟಿಕೋರರಿಗೆ ನಾವು ದುಡ್ಡು ಕೊಡೋಕಾಗುತ್ತಾ? – ಆಪರೇಷನ್​​ ಕಮಲ ಆರೋಪಕ್ಕೆ ಶಾಸಕ ಅಶ್ವಥ್ ನಾರಾಯಣ ತಿರುಗೇಟು..!

ಬೆಂಗಳೂರು : ಕಾಂಗ್ರೆಸ್ ​ಶಾಸಕರನ್ನು ಖರೀದಿಸಲು ಬಿಜೆಪಿಯವರು 100 ಕೋಟಿ ರೂ. ಆಫರ್ ನೀಡಿದ್ದಾರೆ ಎಂದು ಕಾಂಗ್ರೆಸ್ ಶಾಸಕ ರವಿಕುಮಾರ್ ಗೌಡ ಗಂಭೀರ ಆರೋಪ ಮಾಡಿದ್ದರು. ಇದೀಗ ಈ ವಿಚಾರಕ್ಕೆ ಬಿಜೆಪಿ ಶಾಸಕ ಡಾ. ಸಿಎನ್ ಅಶ್ವಥ್ ನಾರಾಯಣ ತಿರುಗೇಟು ಕೊಟ್ಟಿದ್ದಾರೆ.

ಆಪರೇಷನ್​​ ಕಮಲ ಆರೋಪಕ್ಕೆ ತಿರುಗೇಟು ನೀಡಿದ ಡಾ.ಅಶ್ವಥ್ ನಾರಾಯಣ ಅವರು, ಸರ್ಕಾರ ಬೀಳಿಸೋ ಉದ್ದೇಶ ನಮಗೆ ಇಲ್ಲವೇ ಇಲ್ಲ. ಲೂಟಿಕೋರರಿಗೆ ನಾವು ದುಡ್ಡು ಕೊಡೋಕಾಗುತ್ತಾ? ಕಾಂಗ್ರೆಸ್​ನವರು ದಾರಿ ತಪ್ಪಿಸುವ ಹೇಳಿಕೆ ನಿಲ್ಲಿಸಬೇಕು ಎಂದು ಶಾಸಕ ಅಶ್ವತ್ಥ್​ ನಾರಾಯಣ್ ಕಿಡಿಕಾರಿದ್ದಾರೆ.

ಆಪರೇಷನ್​​ ಕಮಲದ ಬಗ್ಗೆ ಹೇಳ್ತಿರೋದು ಇದೇ ಮೊದಲಲ್ಲ. ಮಂಡ್ಯ ಶಾಸಕರು ಇದೆಲ್ಲವನ್ನೂ ಬಿಟ್ಟು ಅಭಿವೃದ್ಧಿ ಕಡೆ ಗಮನ ಹರಿಸಲಿ. 100 ಕೋಟಿ, 50 ಕೋಟಿ ಇದೆಲ್ಲಾ ಕಟ್ಟು ಕಥೆ ಎಂದು ಶಾಸಕ ಅಶ್ವತ್ಥ್​ ನಾರಾಯಣ ಬೆಂಗಳೂರಿನಲ್ಲಿ ಕಿಡಿಕಾರಿದ್ದಾರೆ.

ಇದನ್ನೂ ಓದಿ : ನಟ ದರ್ಶನ್​​ ಹೆಸರಿಗೂ ಬಂತು ಅಲಿಯಾಸ್ ​- FIRನಲ್ಲಿ ದರ್ಶನ್​​ ತೂಗುದೀಪ ಅಲಿಯಾಸ್ ಡಿ ಬಾಸ್​ ಉಲ್ಲೇಖ..!

Leave a Comment

DG Ad

RELATED LATEST NEWS

Top Headlines

MLA ಮುನಿರತ್ನ ವಿರುದ್ಧ ರೇಪ್ ಆರೋಪದ ಬೆನ್ನಲ್ಲೇ ಮಾಜಿ ಕಾರ್ಪೊರೇಟರ್ ಪತಿಯ ಹನಿಟ್ರ್ಯಾಪ್ ವಿಡಿಯೋ ವೈರಲ್..!

ಬೆಂಗಳೂರು : ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಬಿಜೆಪಿ ಶಾಸಕ ಮುನಿರತ್ನ ಸೇರಿ ಏಳು ಮಂದಿಯ ವಿರುದ್ಧ ರಾಮನಗರ ಜಿಲ್ಲಾ ವ್ಯಾಪ್ತಿಯ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ

Live Cricket

Add Your Heading Text Here