ರಾಯಚೂರು : ರಾಯಚೂರಲ್ಲಿ ನಿವೇಶನ ಸ್ವಚ್ಛಗೊಳಿಸುತ್ತಿದ್ದ ಜೆಸಿಬಿ ಚಾಲಕನಿಂದ ಭಾರೀ ಅವಘಡವೊಂದು ನಡೆದಿದೆ. ಬಯಲುಶೌಚಕ್ಕೆ ಹೋದ ಮಹಿಳೆ ಮೇಲೆ ಜೆಸಿಬಿ ಚಾಲಕ ಮಣ್ಣಿನ ರಾಶಿ ಹಾಕಿದ್ದು ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ.
ನಗರದ ಆಶಾಪುರ ರಸ್ತೆಯಲ್ಲಿನ ಜನತಾ ಕಾಲೋನಿಯಲ್ಲಿ ಘಟನೆ ನಡೆದಿದೆ. 32 ವರ್ಷದ ತಾಯಮ್ಮ ಬಯಲುಶೌಚಕ್ಕೆ ಹೋಗುತ್ತಿದ್ದರು ಈ ವೇಳೆ ತಾಯಮ್ಮ ಮೇಲೆ ಮಣ್ಣಿನ ರಾಶಿ ಬಿದ್ದಿದೆ. ಮಣ್ಣ ಹಾಕಿದ ಪರಿಣಾಮ ಉಸಿರಾಟದ ಸಮಸ್ಯೆಯಿಂದ ತಾಯಮ್ಮ ಸಾವನ್ನಪ್ಪಿದ್ದಾರೆ.
ಇನ್ನು ತಾಯಮ್ಮ ಸಾವಿಗೀಡಾಗಿರುವುದರಿಂದ ಮೂರು ಮಕ್ಕಳು ಅನಾಥರಾಗಿದ್ದಾರೆ. ವೆಸ್ಟ್ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಜೆಸಿಬಿ ಮತ್ತು ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ : ಮಿಸ್ಡ್ ಕಾಲ್ನಲ್ಲೇ ಹುಡುಗರಿಗೆ ಹನಿ ಟ್ರ್ಯಾಪ್ – ಕಿಲಾಡಿ ಲೇಡಿ ಸೇರಿ ಮೂವರು ಅರೆಸ್ಟ್..!
Post Views: 272