ಬೆಂಗಳೂರು : ಸ್ಯಾಂಡಲ್ವುಡ್ ಸ್ಟಾರ್ ಡೈರೆಕ್ಟರ್ ತರುಣ್ ಸುಧೀರ್ ಹಾಗೂ ನಟಿ ಸೋನಲ್ ಇಂದು ಗುರು ಹಿರಿಯರ ಸಮ್ಮುಖದಲ್ಲಿ ಸಪ್ತಪದಿ ತುಳಿಯಲಿದ್ದಾರೆ. ಇದಕ್ಕೆ ಮುನ್ನ ದಿನ ನಿನ್ನೆ ಮೈಸೂರು ರಸ್ತೆಯ ಪೂರ್ಣಿಮಾ ಪ್ಯಾಲೇಸ್ನಲ್ಲಿ ಆರತಕ್ಷತೆ ಸಂಭ್ರಮ ಜೋರಾಗಿ ನಡೆಯಿತು.
ಇಂದು ತರುಣ್ ಸುಧೀರ್ ಮನೆಯ ಸಂಪ್ರದಾಯಗಳಂತೆ ಶಾಸ್ತ್ರಗಳನ್ನು ಮಾಡಲಾಗ್ತಿದೆ. ಕಲ್ಯಾಣ ಮಂಟಪದ ಅಲಂಕಾರ ಕೂಡ ಅದ್ಭುತವಾಗಿದೆ. ಪ್ರವೇಶ ದ್ವಾರದಲ್ಲಿ ಮಹಾದ್ವಾರದ ಮಾದರಿ ಅಲಂಕಾರ ಮಾಡಲಾಗಿದ್ದು, ವಿಷ್ಣುವಿನ ದಶಾವತಾರಗಳ ಮಧ್ಯೆ ಕಮಲ ಮಂಟಪ ಸಿದ್ಧವಾಗಿದೆ.
ಇನ್ನು ಕಲಾಂಜನಿ ವೆಡ್ಡಿಂಗ್ಸ್ನ ಕಿರಣ್ ನೇತೃತ್ವದಲ್ಲಿ ಧಾರೆ ಮುಹೂರ್ತದ ಸೆಟ್ ನಿರ್ಮಾಣ ಮಾಡಲಾಗಿದೆ.10:50 ರಿಂದ 11:35ರ ತುಲಾ ಲಗ್ನದಲ್ಲಿ ಧಾರೆ ಮುಹೂರ್ತ ನಡೆಯಲಿದ್ದು, ಈ ಶುಭ ಮುಹೂರ್ತದಲ್ಲಿ ತರುಣ್, ಸೋನಲ್ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
ಇನ್ನು ಆರತಕ್ಷತೆಗೆ ತರುಣ್ ಅವರು ಶೇರ್ವಾನಿಯಲ್ಲಿ ಕಾಣಿಸಿಕೊಂಡರೆ, ಸೋನಲ್ ಲೆಹೆಂಗಾದಲ್ಲಿ ಮಿರ ಮಿರ ಮಿಂಚಿದ್ದರು. ತರುಣ್ ಸದಾ ಕ್ರಿಯಾಶೀಲತೆ ಹುಡುಕೋ ನಿರ್ದೇಶಕ. ಆ ಕ್ರಿಯೇಟಿವಿಟಿ ಮದುವೆಯಲ್ಲೂ ಕಂಟಿನ್ಯೂ ಆಗಿದೆ.
ಇದನ್ನೂ ಓದಿ : ಮಂಡ್ಯದಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು – ರೌಡಿಶೀಟರ್ ಕಾಲಿಗೆ ಪೊಲೀಸರಿಂದ ಫೈರಿಂಗ್..!