ಬೆಂಗಳೂರು : ಮೂಡ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಪಾತ್ರವಿದೆ ಎಂದು ಆರೋಪಿಸಿ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಹೋರಾಟಕ್ಕೆ ಮುಂದಾಗಿರುವ ಹಿನ್ನಲೆ, ಈ ಬಗ್ಗೆ ಮಹತ್ವದ ಸುದ್ದಿಗೋಷ್ಠಿ ನಡೆಸಿದ ಸಿದ್ದರಾಮಯ್ಯ ದಾಖಲೆಗಳ ಸಮೇತ ತಿರುಗೇಟು ನೀಡಿದ್ದರು. ಇದೇ ವೇಳೆ HDKಗೂ ಮುಡಾ ಸೈಟ್ ಸಿಕ್ಕಿದೆ ಎಂದು ಸಚಿವ ಭೈರತಿ ಸುರೇಶ್ ದಾಖಲೆ ಬಿಟ್ಟಿದ್ದಾರೆ.
HDK ಭೂಮಿ ಕುರಿತು ದಾಖಲೆ ನೀಡಿದ ಸಚಿವ ಭೈರತಿ ಸುರೇಶ್ ಅವರು, ಒಂದಲ್ಲಾ..ಎರಡಲ್ಲಾ HDK 21,000 ಚದರಡಿ ಜಾಗ ಪಡೆದಿದ್ದಾರೆ. 1984ರಲ್ಲೇ ಕುಮಾರಸ್ವಾಮಿ ಅವರಿಗೆ ಮುಡಾ ಜಾಗ ಸಿಕ್ಕಿದೆ. ಸದನದಲ್ಲಿಯೇ ವಿರೋಧ ಪಕ್ಷದವರ ಬಂಡವಾಳ ಬಿಚ್ಚಿಡುತ್ತಿದ್ದೆ. ಮುಡಾ ವಿಚಾರ ಚರ್ಚೆ ಮಾಡಲು ನನಗೆ ಅವಕಾಶ ಸಿಗಲಿಲ್ಲ. ನನ್ನ ಬಳಿ ರಾಶಿ-ರಾಶಿ ದಾಖಲೆಗಳಿವೆ, ಅವರ ಬಂಡವಾಳ ನನ್ನ ಬಳಿ ಇದೆ ಎಂದಿದ್ದಾರೆ.
ಹೆಚ್.ಡಿ.ಕುಮಾರಸ್ವಾಮಿಗೆ 21 ಸಾವಿರ ಚದರ ಅಡಿ ಕೊಟ್ಟಿದ್ದೇದೆ. ನನ್ನ ಜಾಗ ಒತ್ತುವರಿ ಆಗಿದೆ ಬದಲಿ ಜಾಗ ಕೊಡಿ ಅಂತಲೂ ಹೆಚ್.ಡಿ ಕುಮಾರಸ್ವಾಮಿ ಮೊನ್ನೆ ಮೊನ್ನೆ ಮುಡಾಗೆ ಪತ್ರ ನೀಡಿದ್ದಾರೆ ಎಂದಿದ್ದಾರೆ.
ಇನ್ನು ಕೈಗಾರಿಕಾ ಉದ್ದೇಶಕ್ಕೆಂದು ಕುಮಾರಸ್ವಾಮಿ ಜಾಗ ಪಡೆದುಕೊಂಡಿದ್ದರು. ಆ ಜಾಗ ಒತ್ತುವರಿ ಆಗಿದೆ ಎಂದು ಅವರೇ ಮುಡಾಗೆ ಪತ್ರ ಬರೆದಿದ್ದರು. ಬದಲಿ ಸ್ಥಳವನ್ನು ನೀಡುವಂತೆಯೂ ಮುಡಾಗೆ ಹೆಚ್ಡಿಕೆ ಕೋರಿಕೆ ಸಲ್ಲಿಸಿದ್ದರು. ಇದು ಅಕ್ರಮನೋ, ಸಕ್ರಮನೋ ಅಂತಾ ತನಿಖೆಯಲ್ಲಿ ಗೊತ್ತಾಗುತ್ತೆ. ನ್ಯಾಯಾಂಗ ಸಮಿತಿ ತನಿಖೆಗೆ ಸರ್ಕಾರ ಒಪ್ಪಿಸಿದೆ, ತನಿಖೆ ಆಗಲಿ ಎಂದು ಸಚಿವ ಭೈರತಿ ಸುರೇಶ್ ತಿಳಿಸಿದ್ದಾರೆ.
ಇದನ್ನೂ ಓದಿ : ರೇಣುಕಾಸ್ವಾಮಿ ಕುಟುಂಬಕ್ಕೆ 1 ಲಕ್ಷ ನೆರವು ನೀಡಿದ ನಟ ವಿನೋದ್ ರಾಜ್ – ಹೇಳಿದ್ದೇನು?