ಬೆಂಗಳೂರು : ನಟ ದರ್ಶನ್ ಭೇಟಿ ಬಳಿಕ ರೇಣುಕಾಸ್ವಾಮಿ ಕುಟುಂಬಸ್ಥರನ್ನು ಭೇಟಿಯಾಗಲು ಚಿತ್ರದುರ್ಗಕ್ಕೆ ಇಂದು ಮುಂಜಾನೆ ಹಿರಿಯ ನಟ ವಿನೋದ್ ರಾಜ್ ಅವರು ತೆರೆಳಿದ್ದಾರೆ. ನೆಲಮಂಗಲದಿಂದ ಚಿತ್ರದುರ್ಗಕ್ಕೆ ವಿನೋದ್ ರಾಜ್ ಹೊರಟ್ಟಿದ್ದು, ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಲಿದ್ದಾರೆ.
ಸದ್ಯ ನಟ ದರ್ಶನ್ ಅವರು ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಜೈಲುವಾಸ ಅನುಭವಿಸುತ್ತಿದ್ದು, ಕಳೆದ ಒಂದೂವರೆ ತಿಂಗಳಿನಿಂದಲೂ ದರ್ಶನ್ ನ್ಯಾಯಂಗ ಬಂಧನದಲ್ಲಿದ್ದಾರೆ. ಪೊಲೀಸ್ ಕಸ್ಟಡಿಯಲ್ಲಿದ್ದಾಗ ನಟ ದರ್ಶನ್ ಅವರನ್ನು ಚಿತ್ರರಂಗದ ಆಪ್ತರು ಬಂದು ಭೇಟಿಯಾಗಿರಲಿಲ್ಲ.
ಆದರೆ, ಈಗ ಪ್ರತಿ ವಾರ ಮೂರು ಜನರಂತೆ ದರ್ಶನ್ ಅವರನ್ನು ಜೈಲಿಗೆ ಬಂದು ನೋಡಿಕೊಂಡು, ಮಾತನಾಡಿಕೊಂಡು ಹೋಗುತ್ತಿದ್ದಾರೆ. ಅಂತೆಯೇ ಎರಡು ದಿನದ ಹಿಂದೆ ಪರಪ್ಪನ ಅಗ್ರಹಾರದಲ್ಲಿರುವ ನಟ ದರ್ಶನ್ರನ್ನ ವಿನೋದ್ ರಾಜ್ ಭೇಟಿಯಾಗಿ ಬಂದಿದ್ದರು.
ಇದನ್ನೂ ಓದಿ : ಬಿಡಿಎನಲ್ಲಿ ಇಂಜಿನಿಯರ್ ಸದಸ್ಯ ಹುದ್ದೆಗಾಗಿ ಶಾಂತರಾಜಣ್ಣ-ನಂಜುಂಡಪ್ಪ ನಡುವೆ ಬಿಗ್ ಫೈಟ್..!
Post Views: 885