Download Our App

Follow us

Home » ಅಪರಾಧ » ರೇಣುಕಾಸ್ವಾಮಿ ಕೊಲೆ ಕೇಸ್​​ – ದರ್ಶನ್ ಗ್ಯಾಂಗ್ ವಿರುದ್ದ ಸಿಗ್ತು ಸ್ಟ್ರಾಂಗ್​​ ಎವಿಡೆನ್ಸ್! ಏನದು ಗೊತ್ತಾ?

ರೇಣುಕಾಸ್ವಾಮಿ ಕೊಲೆ ಕೇಸ್​​ – ದರ್ಶನ್ ಗ್ಯಾಂಗ್ ವಿರುದ್ದ ಸಿಗ್ತು ಸ್ಟ್ರಾಂಗ್​​ ಎವಿಡೆನ್ಸ್! ಏನದು ಗೊತ್ತಾ?

ಬೆಂಗಳೂರು : ಇಡೀ ರಾಜ್ಯಾದ್ಯಂತ ಭಾರೀ ಸದ್ದು ಮಾಡಿದ್ದ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ ನಟ ದರ್ಶನ್ ​ಜೈಲು ಸೇರಿ ಈಗಾಗಲೇ ಬರೋಬ್ಬರಿ ಒಂದು ತಿಂಗಳು ಕಳೆದಿದೆ. ಕಳೆದೆರಡು ದಿನಗಳ ಹಿಂದೆ ಡಿ ಗ್ಯಾಂಗ್​​​ನ ನ್ಯಾಯಾಂಗ ಬಂಧನ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಆರೋಪಿಗಳನ್ನು ಕೋರ್ಟ್​ಗೆ ಹಾಜರುಪಡಿಸಲಾಗಿತ್ತು.  ವಿಚಾರಣೆ ನಡೆಸಿದ ಕೋರ್ಟ್, ನಟ ದರ್ಶನ್ ಹಾಗೂ ಗ್ಯಾಂಗ್ ಗೆ ಆಗಸ್ಟ್ 1ರವರೆಗೆ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸಿ ಆದೇಶ ಹೊರಡಿಸಿತ್ತು.

ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ತನಿಖೆಯಲ್ಲಿ ಹಲವು ಸೀಕ್ರೆಟ್​ಗಳು ಬಯಲಾಗಿವೆ. ಕೊಲೆಯಾದ ರೇಣುಕಾಸ್ವಾಮಿ ಪೋಸ್ಟ್​ ಮಾರ್ಟಂ ರಿಪೋರ್ಟ್ ಚೆಂಜ್ ಮಾಡಲೂ ದರ್ಶನ್​​​​​​ ಗ್ಯಾಂಗ್ ಸಂಚು ರೂಪಿಸಿತ್ತಂತೆ ಎಂದು ತಿಳಿದು ಬಂದಿದೆ. ವಿಕ್ಟೋರಿಯಾ ಆಸ್ಪತ್ರೆ ವೈದ್ಯರಿಗೆ ಕೋಟಿ ಕೋಟಿ ಆಫರ್ ನೀಡಿದ್ದ ಡಿ ಗ್ಯಾಂಗ್,​​ ಹಾರ್ಟ್ ಅಟ್ಯಾಕ್​​​ನಿಂದ ಸಾವು ಎಂದು ರಿಪೋರ್ಟ್ ನೀಡುವಂತೆ ತಿಳಿಸಿತ್ತು ಎಂಬುದು ಬಯಲಾಗಿದೆ.

ಇನ್ನು ರೇಣುಕಾಸ್ವಾಮಿ ಪೊಸ್ಟ್ ಮಾರ್ಟಂ ರಿಪೋರ್ಟ್ ಪೊಲೀಸರ ಕೈ ಸೇರಿದೆ. ವಿಕ್ಟೋರಿಯಾ ಆಸ್ಪತ್ರೆ ಪೋಸ್ಟ್​ಮಾರ್ಟಂ ರಿಪೋರ್ಟ್​ನಲ್ಲಿ ಸ್ಫೋಟಕ ಮಾಹಿತಿ ಬಯಲಾಗಿದ್ದು, ರೇಣುಕಾಸ್ವಾಮಿಗೆ ಹೇಗೆಲ್ಲಾ ಚಿತ್ರಹಿಂಸೆ ನೀಡಿದ್ದರು ಎಂಬುದು ತಿಳಿದು ಬಂದಿದೆ.

ಚಿತ್ರಹಿಂಸೆ ನೀಡಿ ಹೊಡೆದು ಕೊಂದ ಬಗ್ಗೆ ರಿಪೋರ್ಟ್ ನೀಡಿದ ವೈದ್ಯರು , ರೇಣುಕಾಸ್ವಾಮಿಗೆ 4-5 ಗಂಟೆಗಳ ಕಾಲ ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗಿದೆ. ಮನಸೋ ಇಚ್ಚೆ ಹೊಡೆದ ರಭಸಕ್ಕೆ ದೇಹದ 4-5 ಮೂಳೆಗಳು ಮುರಿತವಾಗಿದ್ದು, ತೀವ್ರ ರಕ್ತಸ್ರಾವದಿಂದ ರೇಣುಕಾಸ್ವಾಮಿ ಸಾವನ್ನಪ್ಪಿದ್ದಾನೆ ಎಂಬುದು ಈ ರಿಪೋರ್ಟ್​ನಲ್ಲಿದೆ. ಇನ್ನು ಈ ಪ್ರಬಲ ಸಾಕ್ಷಿ ನೋಡಿದ್ರೆ  ದರ್ಶನ್ – ಪವಿತ್ರಾ ಗ್ಯಾಂಗ್​ಗೆ ಶಿಕ್ಷೆಯಾಗೋದು ಗ್ಯಾರಂಟಿಯಾಗಿದ್ದು, 6 ತಿಂಗಳು ರಿಲೀಸ್ ಆಗೋದು ಡೌಟ್ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ : ದರ್ಶನ್​​ ಜೊತೆ ಜೈಲು ಸೇರಿದ್ದ 4ನೇ ಆರೋಪಿ ರಘು ತಾಯಿ ನಿಧನ..!

Leave a Comment

DG Ad

RELATED LATEST NEWS

Top Headlines

MLA ಮುನಿರತ್ನ ವಿರುದ್ಧ ರೇಪ್ ಆರೋಪದ ಬೆನ್ನಲ್ಲೇ ಮಾಜಿ ಕಾರ್ಪೊರೇಟರ್ ಪತಿಯ ಹನಿಟ್ರ್ಯಾಪ್ ವಿಡಿಯೋ ವೈರಲ್..!

ಬೆಂಗಳೂರು : ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಬಿಜೆಪಿ ಶಾಸಕ ಮುನಿರತ್ನ ಸೇರಿ ಏಳು ಮಂದಿಯ ವಿರುದ್ಧ ರಾಮನಗರ ಜಿಲ್ಲಾ ವ್ಯಾಪ್ತಿಯ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ

Live Cricket

Add Your Heading Text Here