ಹಾಸನ : ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಳೆದ 10 ದಿನಗಳಿಂದ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಕಾವೇರಿ ಉಪನದಿಗಳು ಅವುಗಳಿಗೆ ಅಡ್ಡಲಾಗಿ ನಿರ್ಮಿಸಿರುವ ಜಲಾಶಯಗಳಲ್ಲಿ ಅತ್ಯಧಿಕ ನೀರು ಸಂಗ್ರಹವಾಗಿದೆ. ಈ ಪೈಕಿ ಹೇಮಾವತಿ ಜಲಾಶಯದಲ್ಲೂ ಸಹ ಅತ್ಯಧಿಕ ಒಳಹರಿವು ದಾಖಲಾಗಿದೆ.
ಹಾಸನ ಜಿಲ್ಲೆಯಲ್ಲಿ ಮಳೆಯ ಅಬ್ಬರ ಜೊರಾಗಿದ್ದು, ಜೀವನದಿ ಹೇಮಾವತಿ ಮೈದುಂಬಿ ಹರಿಯುತ್ತಿದ್ದಾಳೆ. ಇನ್ನೂ ಹೇಮಾವತಿ ಜಲಾಶಯದ ಶುಕ್ರವಾರ (ಜುಲೈ 19) ಒಳಹರಿವು ಬರೋಬ್ಬರಿ 40 ಸಾವಿರ ಕ್ಯೂಸೆಕ್ನಷ್ಟು ತಲುಪಿದೆ. ಇಷ್ಟು ಪ್ರಮಾಣದ ನೀರು ಕಳೆದ ಒಂದು ವಾರದಲ್ಲೇ ಅತ್ಯಧಿಕ ಒಳಹರಿವು ಇದಾಗಿದೆ. ಹೇಮಾವತಿ ಡ್ಯಾಂ ಭರ್ತಿಯಾಗಲೂ ಕೇವಲ 4 ಅಡಿ ಮಾತ್ರ ಬಾಕಿ ಉಳಿದಿದ್ದು, 6 ಕ್ರಸ್ಟ್ ಗೇಟ್ಗಳು ಮೂಲಕ ನೀರು ಬಿಡುಗಡೆ ಮಾಡಲಾಗಿದೆ. 25 ಸಾವಿರ ಕ್ಯೂಸೆಕ್ ನೀರು ರಿಲೀಸ್ ಮಾಡಲಾಗಿದೆ.
ಇದನ್ನೂ ಓದಿ : ಹರ್ಮನ್ ಪಡೆ ಅಬ್ಬರಕ್ಕೆ ಪಾಕ್ ಧೂಳಿಪಟ – ಏಷ್ಯಾಕಪ್ನಲ್ಲಿ ಭಾರತಕ್ಕೆ ಗೆಲುವಿನ ಶುಭಾರಂಭ..!
Post Views: 890