ಉತ್ತರ ಕನ್ನಡಕ್ಕೆ ಈ ಬಾರಿ ಬಿಜೆಪಿ ಕ್ಯಾಂಡಿಡೇಟ್ ಚೇಂಜ್ ಆಗಲಿದ್ದು, ಅತ್ಯಂತ ಹಿರಿಯ ಅನುಭವಿ ರಾಜಕಾರಣಿಗೆ ಉತ್ತರ ಕನ್ನಡದ ಟಿಕೆಟ್ ಸಿಗಲಿದೆ. ಮಾಜಿ ಸ್ಪೀಕರ್, ಮಾಜಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಬಿಜೆಪಿ ಟಿಕೆಟ್ ಸಿಗಲಿದೆ. ಕಾಗೇರಿ ಗುಡ್ ಮ್ಯಾನ್ ಎಂದೇ ರಾಜಕೀಯದಲ್ಲಿ ಖ್ಯಾತಿ ಪಡೆದಿದ್ದಾರೆ.
ವಿಶ್ವೇಶ್ವರ ಹೆಗಡೆ ಕಾಗೇರಿಯವರು ಜಿಲ್ಲಾ ರಾಜಕಾರಣದಲ್ಲಿ ಪ್ರಭಾವಿಯಾಗಿದ್ದಾರೆ. ಪ್ರಬಲ ಬ್ರಾಹ್ಮಣ ಸಮುದಾಯದವರಾದ್ರು ಎಲ್ಲರೊಂದಿಗೆ ಸ್ನೇಹ ಪರತೆ, ಎಲ್ಲಾ ಜಾತಿ ಸಮುದಾಯದೊಂದಿಗೆ ಬೆರೆಯುವ ಗುಣವುಳ್ಳ ನಾಯಕರಾಗಿದ್ದಾರೆ. ಆರು ಬಾರಿ ಸತತವಾಗಿ ಅಸೆಂಬ್ಲಿಗೆ ಗೆದ್ದಿದ್ದಾರೆ. ಈ ಬಾರಿ ಕೇಂದ್ರಕ್ಕೆ ಕರೆಸಿಕೊಳ್ಳಲು ಬಿಜೆಪಿ ಹೈಕಮಾಂಡ್ ತೀರ್ಮಾನಿಸಿದೆ.
ಕಾಗೇರಿ ಸ್ಪರ್ಧಿಸಿದರೆ ಜಿಲ್ಲೆಯ ಎಲ್ಲಾ ಮುಖಂಡರು ಒಪ್ಪಿಕೊಳ್ಳುತ್ತಾರೆ, ಗುಡ್ ಮ್ಯಾನ್ ಕಾಗೇರಿಗೆ ಯಾವುದೇ ವಿವಾದ, ಯಾರ ಅಪಸ್ವರ ಇಲ್ಲ.
ಕಾಗೇರಿಯವರು RSS ವಲಯದಲ್ಲೂ ಅತ್ಯಂತ ನಿಕಟ ಸಂಪರ್ಕ ಹೊಂದಿದ್ದಾರೆ. ಹೀಗಾಗಿ ಬಿಜೆಪಿ ಹೈಕಮಾಂಡ್ ಕಾಗೇರಿಗೆ ಸ್ಪರ್ಧಿಸಲು ರೆಡಿಯಾಗಿ ಎಂದಿದ್ದಾರೆ. ಈ ಬಗ್ಗೆ ಬಿಟಿವಿಗೆ ಬಿಜೆಪಿ ಉನ್ನತ ಮೂಲಗಳಿಂದ ಮಾಹಿತಿ ದೊರಕಿದೆ.
ಇದನ್ನೂ ಓದಿ : ಇಂದು ಸರ್ಕಾರದ 5ನೇ ಗ್ಯಾರಂಟಿ ಯುವನಿಧಿಗೆ ಚಾಲನೆ..