ಉಡುಪಿ : ರಾಜ್ಯದಲ್ಲಿ ವರುಣನ ಆರ್ಭಟ ಜೋರಾಗಿದೆ. ಎಡೆಬಿಡದೇ ಸುರಿಯುತ್ತಿರೋ ಮಳೆಯಿಂದ ಕರಾವಳಿಯಲ್ಲಿ ಭಾರೀ ಅನಾಹುತವನ್ನೇ ವರುಣ ಸೃಷ್ಟಿಸಿದ್ದಾನೆ. ನೆರೆ ಹಿನ್ನೆಲೆ ಮನೆ ಜಲಾವೃತಗೊಂಡ ಬಳಿಕ ಜಿಲ್ಲೆಯ ಬ್ರಹ್ಮಾವರ ತಾಲೂಕು ಅಚ್ಲಾಡಿಯ ಅತಿಲೋಡಿ ಮಹಾಬಲ ಶೆಟ್ಟಿ ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ.
ಉಸಿರಾಟದ ಸಮಸ್ಯೆಯಿಂದ ಬಳಲಿದ ವೃದ್ಧರೊಬ್ಬರನ್ನು ಜಲಾವೃತಗೊಂಡ ಮನೆಯಿಂದ ಅಗ್ನಿಶಾಮಕ ದಳದ ನೆರವಿನಿಂದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳೀಯರು ರಕ್ಷಣಾ ಕಾರ್ಯಕ್ಕೆ ಸಾಥ್ ನೀಡಿದ್ರು. ಆಸ್ಪತ್ರೆಗೆ ದಾಖಲಿಸಿದ ಬಳಿಕ ಮಹಾಬಲ ಶೆಟ್ಟಿ ಚೇತರಿಸಿಕೊಂಡಿದ್ದಾರೆ.
ಇದನ್ನೂ ಓದಿ : ನಾಗೇಂದ್ರ ED ಕಸ್ಟಡಿ ನಾಳೆಗೆ ಅಂತ್ಯ – ಇಂದೇ ಹೋಟೆಲ್ಗೆ ಕರೆದೊಯ್ದು ಸ್ಥಳ ಮಹಜರ್ ಸಾಧ್ಯತೆ..!
Post Views: 46