ಬೆಂಗಳೂರು : ಕಾಂಗ್ರೆಸ್ ಗ್ಯಾರೆಂಟಿ ಸಮಿತಿಗೆ ವಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ. ಗ್ಯಾರೆಂಟಿಗೇ ದುಡ್ಡಿಲ್ಲ.. ಸಮಿತಿ ರಚಿಸೋ ಅಗತ್ಯ ಇತ್ತಾ..? ಕಾಂಗ್ರೆಸ್ ಕಾರ್ಯಕರ್ತರಿಗೆ ಹುದ್ದೆ ಭಾಗ್ಯನಾ..? ಕಚೇರಿ, ಕಾರು, ಗೌರವ ಧನ ಸೌಲಭ್ಯ ಬೇಕಿತ್ತಾ..?
ಸಮಿತಿಗೆ ವರ್ಷಕ್ಕೆ 16 ಕೋಟಿ ಖರ್ಚು ಮಾಡ್ಬೇಕಾ..? ಕ್ಷೇತ್ರಗಳಿಗೆ ಅನುದಾನ ಕೊಡಲೂ ಹಣ ಇಲ್ಲ ಎನ್ನುತ್ತಿದ್ದೀರಿ..? ರಾಜ್ಯ ಸಮಿತಿ, ಜಿಲ್ಲಾ ಸಮಿತಿ ರಚಿಸಿ ಕೋಟಿ-ಕೋಟಿ ಖರ್ಚು ಅಗತ್ಯನಾ..? ರಾಜ್ಯ ಸಮಿತಿ ಅಧ್ಯಕ್ಷರಿಗೆ ಸಂಪುಟ ದರ್ಜೆ ಸ್ಥಾನ ಮಾನ ಬೇಕಿತ್ತಾ..? ಎಂದು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಸರ್ಕಾರದ ನಿರ್ಧಾರಕ್ಕೆ ವಿಪಕ್ಷ ಬಿಜೆಪಿ, ಜೆಡಿಎಸ್ ವಿರೋಧ ಪಡಿಸಿದ್ದು, ಗ್ಯಾರಂಟಿ ಜಾರಿ ಸಮಿತಿಗೆ ಸಾರ್ವಜನಿಕರಿಂದಲೂ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ.
ಸರ್ಕಾರ 5000 ಕಾರ್ಯಕರ್ತರಿಗೆ ಅಧಿಕಾರ ಭಾಗ್ಯ ಕೊಡ್ತಿದೆ, ಜಿಲ್ಲಾ ಸಮಿತಿ ಸದಸ್ಯರಿಗೆ ಗೌರವ ಧನ ನೀಡಲು ತೀರ್ಮಾನಿಸಿದೆ. 3 ಹಂತದ ಸಮಿತಿ ರಚಿಸಿ ಗೌರವ ಧನ ಕೊಡುತ್ತಿದೆ. ರಾಜ್ಯ ಮಟ್ಟದ ಅಧ್ಯಕ್ಷ, ಐವರು ಉಪಾಧ್ಯಕ್ಷರಿಗೆ ಸಂಪುಟ ಸ್ಥಾನ, ಜಿಲ್ಲಾಧ್ಯಕ್ಷರಿಗೆ ತಿಂಗಳಿಗೆ 50 ಸಾವಿರ ಗೌರವಧನ ಕೊಡಲಿದೆ. 21 ಸದಸ್ಯರ ನೇಮಕ ಹಾಗೂ ಕ್ಷೇತ್ರವಾರು ಅಧ್ಯಕ್ಷರಿಗೆ 20-25 ಸಾವಿರ, ಕ್ಷೇತ್ರಕ್ಕೆ 11 ಮಂದಿ ನೇಮಕ ಮಾಡಲಾಗುತ್ತದೆ. ಎರಡು ವರ್ಷಕ್ಕೊಮ್ಮೆ ಸಮಿತಿ ರಚನೆ, ಸೋತವರಿಗೆ ಅವಕಾಶವಿರಲಿದೆ.
ಇದನ್ನೂ ಓದಿ : ನೀವು ಶ್ರೀರಾಮನ ಹೆಸರಲ್ಲಿ ರಾಜಕೀಯ ಮಾಡ್ತಿದ್ದೀರಿ; ಬಿಜೆಪಿ ನಾಯಕರಿಗೆ ಸಿದ್ದು ತಿರುಗೇಟು..