ಬೆಂಗಳೂರು : ಅಕ್ರಮವಾಗಿ ವಿದೇಶಿ ಚಾಕಲೇಟ್ ಮಾರಾಟ ಮಾಡುತ್ತಿದ್ದ ಗೋಡೌನ್ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ಮಾಡಿರುವ ಘಟನೆ ನಡೆದಿದೆ. ಬೆಂಗಳೂರಿನ ಸುಧಾಮನಗರದಲ್ಲಿರುವ ನರೇಂದರ್ ಸಿಂಗ್ ಎಂಬಾತನ ಮಾಲೀಕತ್ವದ ಮಮತ ಏಜೇನ್ಸಿ ಮೇಲೆ ದಾಳಿ ಮಾಡಿದ್ದಾರೆ.
ಬೆಂಗಳೂರಿನ ಸುಧಾಮನಗರದಲ್ಲಿರುವ ಮಮತಾ ಏಜೇನ್ಸಿಗೆ ನರೇಂದರ್ ಸಿಂಗ್ ವಿದೇಶಿ ಚಾಕಲೇಟ್ಗಳನ್ನು ಅಕ್ರಮವಾಗಿ ತರಿಸುತ್ತಿದ್ದನು. ನಂತರ ನಕಲಿ ರ್ಯಾಪರ್ ಹಾಕಿ ಮಾಲ್ ಹಾಗು ಸೂಪರ್ ಮಾರ್ಕೆಟ್ ಗಳಿಗೆ ಸಪ್ಲೈ ಮಾಡುತ್ತಿದ್ದನು.
ಈ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ತಂಡ ಗೋಡೌನ್ ಮೇಲೆ ರೇಡ್ ಮಾಡಿದೆ. ದಾಳಿ ನಡೆದ ನಂತರ ಮಾಲೀಕ ನರೇಂದರ್ ಸಿಂಗ್ ಎಸ್ಕೇಪ್ ಆಗಿದ್ದಾನೆ. ಇನ್ನು ದಾಳಿ ವೇಳೆ ಗೋಡೌನ್ನಲ್ಲಿ ಲಕ್ಷಾಂತರ ರೂ ಮೌಲ್ಯದ ಮಾಲು ಪತ್ತೆಯಾಗಿದೆ. ಇನ್ನು ನರೇಂದರ್ ಸಿಂಗ್ ವಿರುದ್ದ ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ನರೇಂದರ್ ಸಿಂಗ್ಗಾಗಿ ಸಿಸಿಬಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಉಡುಪಿಯ ಕಾಪು ಮಾರಿಗುಡಿ ದೇವಸ್ಥಾನಕ್ಕೆ ಕ್ರಿಕೆಟರ್ ಸೂರ್ಯಕುಮಾರ್ ಯಾದವ್ ಭೇಟಿ..!