ಬಳ್ಳಾರಿ : ಹಲವು ಆರೋಪಗಳ ಬೆನ್ನಲ್ಲೇ ಬಳ್ಳಾರಿ SP ರಂಜಿತ್ ಕುಮಾರ್ ಬಂಡಾರು ಅವರನ್ನು ಎತ್ತಂಗಡಿ ಮಾಡಲಾಗಿದೆ. ಯಾವುದೇ ಸ್ಥಳ ತೋರಿಸದೇ ಬಳ್ಳಾರಿ SP ರಂಜಿತ್ ಅವರನ್ನು ಎತ್ತಂಗಡಿ ಮಾಡಿ ಸರ್ಕಾರ ಆದೇಶಿಸಿದೆ.
ಈ ಹಿಂದೆ ಬಳ್ಳಾರಿ ಜಿಲ್ಲೆಯಲ್ಲಿ SP ರಂಜಿತ್ ವಿರುದ್ಧ ಹಲವು ಹಗರಣಗಳ ಆರೋಪ ಕೇಳಿ ಬಂದಿತ್ತು. ಇದ್ರ ಬೆನ್ನಲ್ಲೇ ಸ್ಪಾಂಜ್ ಐರನ್ ಅಕ್ರಮವಾಗಿ ಸಾಗಾಟವಾಗುತ್ತಿರುವ ಸಂಬಂಧ ಬಿಟಿವಿ ವರದಿ ಮಾಡಿತ್ತು. ಆಂಧ್ರಪ್ರದೇಶಕ್ಕೆ ಅಕ್ರಮವಾಗಿ ಸ್ಪಾಂಜ್ ಐರನ್ ಸಾಗಾಣೆಯಾಗುತ್ತಿದ್ರು ಕ್ರಮ ಕೈಗೊಳ್ಳದ ಆರೋಪ SP ರಂಜಿತ್ ಕುಮಾರ್ ಬಂಡಾರು ವಿರುದ್ಧ ಕೇಳಿ ಬಂದಿತ್ತು.
ಈ ಎಲ್ಲಾ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದ ಬಗ್ಗೆ ತಮ್ಮ ಗಮನಕ್ಕೆ ಬಂದಿದ್ದರು ಸಹ ಯಾವುದೇ ಕೇಸ್ ದಾಖಲಿಸದೆ ಬಳ್ಳಾರಿಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ SP ರಂಜಿತ್ ವಿಫಲರಾಗಿದ್ದಾರೆ. ಇದೀಗ ಈ ಎಲ್ಲಾ ಆರೋಪಗಳ ಬೆನ್ನಲ್ಲೇ SP ರಂಜಿತ್ ಕುಮಾರ್ ಬಂಡಾರು ಅವರನ್ನು ಯಾವುದೇ ಸ್ಥಳ ತೋರಿಸದೇ ಸರ್ಕಾರ ವರ್ಗವಣೆ ಮಾಡಿ ಅದೇಶಿಸಿದೆ.
ಇದನ್ನೂ ಓದಿ : ಯಾದಗಿರಿಯಲ್ಲಿ ರಾತ್ರೋರಾತ್ರಿ ದೆವ್ವ ಪ್ರತ್ಯಕ್ಷ : ದೃಶ್ಯ ಮೊಬೈಲ್ನಲ್ಲಿ ಸೆರೆ ಹಿಡಿದ ಬೈಕ್ ಸವಾರರು..!