ಬೆಂಗಳೂರು : ನೈಸ್ ರಸ್ತೆ ಸಮೀಪದ ಕೆರೆಗೆ ಹಾರಿ ಯುವ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 20 ವರ್ಷದ ಯುವತಿ ಅಂಜನಾ, ಕೋಣನಕುಂಟೆಯ 25 ವರ್ಷದ ಯುವಕ ಶ್ರೀಕಾಂತ್ ಸಾವನ್ನಪ್ಪಿರುವ ದುರ್ದೈವಿಗಳು.
ಈ ಜೋಡಿ ಕಳೆದ ಕೆಲ ವರ್ಷಗಳಿಂದ ಪರಸ್ಪರ ಪ್ರೀತಿಸ್ತಿದ್ದರು. ತಲಘಟ್ಟಪುರ ಸಮೀಪದ ಅಂಜನಾಪುರದಲ್ಲಿ ಯುವತಿ ಅಂಜನಾ ವಾಸವಿದ್ದಳು. ಕೋಣನಕುಂಟೆಯಲ್ಲಿ ಯುವಕ ಶ್ರೀಕಾಂತ್ ವಾಸವಿದ್ದ. ಇವರಿಬ್ಬರ ಪ್ರೀತಿಗೆ ಅಂಜನಾ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಪ್ರೇಮಿಗಳು ಜುಲೈ 1ರಂದು ನಾಪತ್ತೆಯಾಗಿದ್ದರು. ಈ ಹಿನ್ನಲೆ ಪೋಷಕರು ಕೋಣನಕುಂಟೆ ಮತ್ತು ತಲಘಟ್ಟಪುರ ಠಾಣೆಯಲ್ಲಿ ನಾಪತ್ತೆ ದೂರು ನೀಡಿದ್ದರು.
ಇದೀಗ ಈ ಪ್ರೇಮಿಗಳು ನೈಸ್ ರಸ್ತೆ ಸಮೀಪದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಅಂಜನಾ, ಶ್ರೀಕಾಂತ್ ಸಾವು ಭಾರೀ ಅನುಮಾನಕ್ಕೆ ಕಾರಣವಾಗಿದ್ದು, ತನಿಖೆ ಮುಂದುವರೆದಿದೆ. ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.
ಇದನ್ನೂ ಓದಿ : ಮೈಮುಲ್ ಅಧ್ಯಕ್ಷ ಸ್ಥಾನಕ್ಕೆ ದಿಢೀರ್ ರಾಜೀನಾಮೆ ಕೊಟ್ಟ ಪಿಎಂ ಪ್ರಸನ್ನ – ಪಶುಸಂಗೋಪನಾ ಸಚಿವರ ಕಿರುಕುಳಕ್ಕೆ ರಿಸೈನ್ ಮಾಡಿದ್ರಾ