ಬೆಂಗಳೂರು : ಬೆಂಗಳೂರಿನ ಲಾಕಾಸ್ ಪಬ್ ಮ್ಯಾನೇಜರ್ ಎಳನೀರು ಮಾರಾಟ ಮಾಡುವ 13 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ಈ ಸಂಬಂಧ ಲಕಾಸ್ ಪಬ್ ಮ್ಯಾನೇಜರ್ ಜೋಸೆಫ್ ಎಂಬಾತನ ವಿರುದ್ದ ಬೆಳ್ಳಂದೂರು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.


ಮ್ಯಾನೇಜರ್ ಜೋಸೆಫ್ ವಿರುದ್ಧ ದೂರು ನೀಡಿದ್ರೂ ಕೂಡ ಪೊಲೀಸರು ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಘಟನೆ ಬಗ್ಗೆ ದೂರು ನೀಡಿ 24 ಗಂಟೆ ಕಳೆದರೂ ಬೆಳ್ಳಂದೂರು ಸಬ್ ಇನ್ಸ್ಪೆಕ್ಟರ್ ಕಿಶನ್ ರಾಮಯ್ಯ ಆಕ್ಷನ್ ತಗೆದುಕೊಳ್ಳದೇ ನಿರ್ಲಕ್ಷ್ಯ ತೋರಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಸಬ್ ಇನ್ಸ್ಪೆಕ್ಟರ್ ಕಿಶನ್ ರಾಮಯ್ಯ ವಿರುದ್ಧ ಮಹಿಳಾ ವಕೀಲೆ ಗಿರಿಜಾ ಗಂಭೀರ ಆರೋಪ ಮಾಡಿದ್ದು, ಈ ಕೂಡಲೇ ಪಬ್ ಮ್ಯಾನೇಜರ್ ಜೋಸೆಫ್ನನ್ನು ಬಂಧಿಸಿ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.



ಇದನ್ನೂ ಓದಿ : ಕೋಟಿ ಕೋಟಿ ಲೂಟಿ ಮಾಡಿದ PES ಶಿಕ್ಷಣ ಸಂಸ್ಥೆ ಮೇಲೆ ಬೆಳ್ಳಂಬೆಳಗ್ಗೆ IT ದಾಳಿ!
Author: Btv Kannada
Post Views: 522







