Download Our App

Follow us

Home » ಅಪರಾಧ » ಅತಿ ವೇಗ ಹಾಗೂ ನಿರ್ಲಕ್ಷ್ಯದಡಿ ರಾಜ್ಯದಲ್ಲಿ ಮೊದಲ ಬಿಎನ್​​​ಎಸ್ ಪ್ರಕರಣ ದಾಖಲು..!

ಅತಿ ವೇಗ ಹಾಗೂ ನಿರ್ಲಕ್ಷ್ಯದಡಿ ರಾಜ್ಯದಲ್ಲಿ ಮೊದಲ ಬಿಎನ್​​​ಎಸ್ ಪ್ರಕರಣ ದಾಖಲು..!

ಹಾಸನ : ರಾಜ್ಯದಲ್ಲಿ ಮೊದಲ ಬಿಎನ್​​ಎಸ್ ಪ್ರಕರಣವೊಂದು ದಾಖಲಾಗಿದೆ. ಅತಿ ವೇಗ ಹಾಗು ನಿರ್ಲಕ್ಷ್ಯತನದಿಂದ ವಾಹನ ಚಾಲನೆ ಮಾಡಿದ್ದ ಸಾಗರ್ ಎಂಬಾತನ ವಿರುದ್ದ ಹಾಸನ ರೂರಲ್ ಪೊಲೀಸ್ ಠಾಣೆಯಲ್ಲಿ ಬಿಎನ್​​​ಎಸ್ ಅಂಡರ್ ಸೆಕ್ಷನ್ 281, 106 ಅಡಿ ಪ್ರಕರಣ ದಾಖಲಾಗಿದೆ.

ಕಾಶಿ ಯಾತ್ರೆ ಮುಗಿಸಿ ವಾಪಾಸ್ ಆಗಿದ್ದ ಶಂಕರೇಗೌಡರ ಅತ್ತೆ  ಹಾಗೂ  ಮಾವ ಯೋಗೇಶ್​​ರನ್ನ ಇಂದು ಕಾರು ಚಾಲಕ  ಸಾಗರ್​​ ಪಿಕಪ್ ಮಾಡಿದ್ದನು. ಆದರೆ ಚಾಲಕ ಸಾಗರ್​​​ನ ಅತಿ ವೇಗ ಹಾಗು ನಿರ್ಲಕ್ಷ್ಯತನದಿಂದ ಕಾರು ಹಾಸನದ ಹಳೆಬೀಡು ರಸ್ತೆ ಸೀಗೇಗೇಟ್ ಹತ್ತಿರದ ಸೇತುವೆಯಿಂದ ಕೆಳಗೆ ಪಲ್ಟಿ ಹೊಡೆದಿದೆ.

ಇನ್ನು ಘಟನೆಯ ಪರಿಣಾಮ ಅಪಘಾತದಲ್ಲಿ ಯೋಗೇಶ್ ಬಚಾವ್ ಆಗಿದ್ರೆ  ವೈದ್ಯರ ಅತ್ತೆ ಇಂದು ಸಾವನ್ನಪ್ಪಿದ್ದಾರೆ. ಈ ಸಂಬಂಧ ವೈದ್ಯ ಶಂಕರೇಗೌಡ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರಿನ ಮೇರೆಗೆ  ಹಾಸನ ರೂರಲ್ ಪೊಲೀಸ್ ಠಾಣೆಯಲ್ಲಿ ಬೆಳಗ್ಗೆ 6-30‌ಕ್ಕೆ  ಮೊದಲ ಬಿಎನ್ ಎಸ್ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ರಿಯಾಲಿಟಿ ಶೋ ಹೆಸರಿನಲ್ಲಿ ವಂಚನೆ : ಪೋಷಕರಿಂದ ಲಕ್ಷಾಂತರ ಹಣ ಪಡೆದ ಕಂಪೆನಿ – ಪ್ರಕರಣ ದಾಖಲು..!

Leave a Comment

DG Ad

RELATED LATEST NEWS

Top Headlines

ಬೆಳಗಾವಿ : ಗೃಹಲಕ್ಷ್ಮಿ ಹಣ ಕೂಡಿಟ್ಟು ಸ್ವಉದ್ಯೋಗ ಆರಂಭಿಸಿದ ಮಹಿಳೆ..!

ಬೆಳಗಾವಿ : ಕಾಂಗ್ರೆಸ್ ಸರ್ಕಾರದ ಪಂಚ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯಿಂದ ಹಲವು ಮಂದಿ ಪ್ರಯೋಜನ ಪಡೆದುಕೊಂಡಿದ್ದಾರೆ. ಈ ಹಿಂದೆ ಗೃಹಲಕ್ಷ್ಮಿಯ ಹಣ ಕೂಡಿಟ್ಟು ಫ್ರಿಜ್, ಅಂಗಡಿ

Live Cricket

Add Your Heading Text Here